ಅಯೋಧ್ಯೆ ರಾಮೋತ್ಸವ: ಕೇಸರಿಮಯವಾದ ನಗರನಗರ, ಜಿಲ್ಲಾದ್ಯಂತ ಪ್ರಭು ಶ್ರೀರಾಮನ ಸ್ಮರಣೆ, ತಾರಕ ಮಂತ್ರ ಪಠನೆ, ಹೋಮ, ಹವನ, ಅಲಂಕಾರ, ಪೂಜೆ ನಡೆದಿದ್ದು, ಜ.22ರ ಇಡೀ ದಿನ ಪ್ರಸಾದ, ಪಾನಕ ವಿತರಣೆಗೆ ಲಕ್ಷಾಂತರ ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆಯಿಂದಲೇ ಮಾವಿನ ತೋರಣ, ಕೇಸರಿ ತೋರಣ, ಫ್ಲೆಕ್ಸ್, ಬ್ಯಾನರ್ ಕಟ್ಟುತ್ತಿದ್ದರೆ, ಮಹಿಳೆಯರು ಪೂಜೆ, ಇತರೆ ಧಾರ್ಮಿಕ ಕಾರ್ಯದಲ್ಲಿ ಮಗ್ನರಾಗಿದ್ದರು.