ರೈತನ ಮಾತಿಗೆ ತಲೆದೂಗಿದ ಕೃಷಿ ವಿಜ್ಞಾನಿಗಳು!ಕುಂದಗೋಳ ತಾಲೂಕು ಹಿರೇಗುಂಜಳ ಗ್ರಾಮದ ಸಾವಯವ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ ಹೀಗೆ ತನ್ನ ಕೃಷಿ ಬದುಕಿನ ಬಗ್ಗೆ ಸಹಜ ಮತ್ತು ನಿರರ್ಗಳವಾಗಿ ಮಾತನಾಡುತ್ತಿದ್ದರೆ, ವೇದಿಕೆಯಲ್ಲಿ ಸೂಟುಧಾರಿಗಳಾಗಿ ಕುಳಿತಿದ್ದ ಕೃಷಿ ವಿಜ್ಞಾನಿಗಳಾದ ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ್, ಶಿವಮೊಗ್ಗದ ಡಾ.ಆರ್.ಸಿ.ಜಗದೀಶ, ಮಂಡ್ಯದ ಡಾ.ಹರಿಕುಮಾರ, ಬಿ.ಡಿ.ಬಕಾಯಿ ಸೇರಿದಂತೆ ಹಲವರು ತದೇಕಚಿತ್ತದಿಂದ ಆತನ ಮಾಗೆ ತಲೆದೂಗುತ್ತಿದ್ದರು.