ಸಮೀಪದ ಯಾದವಾಡ ಹಾಗೂ ಇತರೆ ಗ್ರಾಮಸ್ಥರ, ರೈತರ ತೀವ್ರ ವಿರೋಧದ ಮಧ್ಯೆಯೂ ಗುರುವಾರ ಯಾದವಾಡ, ಪುಡಕಲಕಟ್ಟಿ, ಕರಡಿಗುಡ್ಡ ಗ್ರಾಮಗಳ ಮಧ್ಯೆ ಸ್ಥಾಪನೆಗೊಳ್ಳುತ್ತಿರುವ ಮೃಣಾಲ್ ಸಕ್ಕರೆ ಕಾರ್ಖಾನೆ ಕಟ್ಟಡದ ಕಾಲಂ ಪೂಜೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ನೆರವೇರಿಸಿದರು.