ಜನಸ್ನೇಹದೆಡೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸರು!ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಹೊಸತೊಂದು ಅಧ್ಯಾಯ ಶುರುವಾಗಿದೆ. ಪೊಲೀಸರೇ ಜನರ ಬಳಿ ತೆರಳಿ ಅವರ ದುಃಖ ದುಮ್ಮಾನ ಕೇಳಿ, ಸಾಧ್ಯವಾದರೆ ಅಲ್ಲಿಯೇ ಬಗೆಹರಿಸಿ, ಇಲ್ಲವೇ ಕಾನೂನು ನೆರವನ್ನು ನೀಡುವ ನಿಟ್ಟಿನಲ್ಲಿ ಜನಸ್ನೇಹಿ ಪೊಲೀಸಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ.