ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಬೀಜದುಂಡೆ ತಯಾರಿಕೆಅರಸೀಕೆರೆ ತಾಲೂಕಿನ ಕೊಳಗುಂದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಬೇಸಿಗೆ ಶಿಬಿರದಲ್ಲಿ 1000 ಬೀಜದುಂಡೆ ತಯಾರಿಸಿ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಹಾಕಿದರು. ಪರಿಸರ ರಕ್ಷಣೆ ಮಾಡಿದರೆ ನಮ್ಮ ರಕ್ಷಣೆ ಮಾಡಿದಂತೆ ಎಂದು ತಿಳಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲಸು, ಬೇವು, ಹುಣಸೆ, ಹೊಂಗೆ, ನೇರಳೆ ಬೀಜಗಳನ್ನು ತಂದು ಮಣ್ಣು ಸಗಣಿ ಮಿಶ್ರಣ ಮಾಡಿ ಮಣ್ಣಿನ ಉಂಡೆಗಳನ್ನು ತಯಾರಿಸಿದರು. ನೈಸರ್ಗಿಕವಾಗಿ ಸಂಪೋಷಿಸಿ ತಯಾರಿಸಿದ ಬೀಜದುಂಡಗಳನ್ನು ಎಸೆಯುವ ಮೂಲಕ ಗಿಡ ಮರಗಳನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಜೊತೆಗೆ ಬೇಸಿಗೆ ಶಿಬಿರದಲ್ಲಿ ಕ್ರೀಡಾಂಗಣ, ದೇವಾಲಯ, ಪಾರ್ಕ್, ಮನೆ, ಆಸ್ಪತ್ರೆ ಶಾಲೆಗಳ ಮಾಡೆಲ್ ತಯಾರಿಸಿ ಶಿಬಿರದ ಮಹತ್ವ ಹೆಚ್ಚಿಸಿದರು.