₹300 ಕೋಟಿ ವ್ಯವಹಾರದ ಗ್ರಾಮಕ್ಕೆ ಸೌಲಭ್ಯ ಕಲ್ಪಿಸಬೇಕು: ಡಾ.ಎಚ್.ಎಸ್.ಧರ್ಮರಾಜ್ವಾರ್ಷಿಕ ೩೦೦ ಕೋಟಿ ರು. ವಹಿವಾಟು ನಡೆಸುತ್ತಿರುವ ಹೊಂಕರವಳ್ಳಿ ಗ್ರಾಮಕ್ಕೆ ಬ್ಯಾಂಕ್ ಸೌಲಭ್ಯ, ಆರೋಗ್ಯ ಕೇಂದ್ರ, ಪಶು ಆಸ್ಪತ್ರೆಯನ್ನು ಸರ್ಕಾರ ಕಲ್ಪಿಸಬೇಕೆಂದು ಪ್ರಗತಿ ಕೃಷಿಕ ಡಾ.ಎಚ್.ಎಸ್.ಧರ್ಮರಾಜ್ ಆಗ್ರಹಿಸಿದರು. ಹಾಸನದ ಆಕಾಶವಾಣಿಯ ಹಳ್ಳಿ ಧ್ವನಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.