• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗೌರವಯುತ ಬದುಕಿಗಾಗಿ ಮದ್ಯಸೇವನೆ ತೊರೆಯಿರಿ
ಮದ್ಯವ್ಯಸನಕ್ಕೊಳಗಾದ ಬಹುತೇಕರ ಕುಟುಂಬಗಳ ಮನ - ಮನೆಗಳಲ್ಲಿ ನೆಮ್ಮದಿ ಹಾಳಾಗುತ್ತದೆ. ಸಮಾಜದ ಸದೃಢತೆಗೆ ಉತ್ತಮ ಸಂಸಾರದ ಬದುಕು ಕಟ್ಟಿಕೊಳ್ಳಲು ಕುಡಿತದಂತಹ ಚಟದಿಂದ ದೂರವಾಗಿ ಗೌರವಯುತವಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದು ಹಾಸನ ಅದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು. 8ನೇ ದಿವಸದ ಮದ್ಯವರ್ಜನ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕರು ಎ. ಮಂಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಪ್ತ ವ್ಯಸನಗಳಲ್ಲಿ ಮದ್ಯವ್ಯಸನ ಬಹಳ ಕೆಟ್ಟದಾಗಿದ್ದು, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಪಣ ತೊಟ್ಟು ದುಶ್ಚಟಗಳನ್ನು ದೂರಮಾಡಬೇಕು ಎಂದರು.
ಜಾತ್ರೆ ನಂತರ ಗೋಲ್ಡ್‌ ಪಾಸ್‌ ಅಕ್ರಮ ಬಹಿರಂಗ ಮಾಡುವೆ
ದೇವಿ ದರ್ಶನ ವ್ಯವಸ್ಥೆ ಶಿಸ್ತಿನ ಮತ್ತು ಕ್ರಮಬದ್ಧ ರೀತಿಯಲ್ಲಿ ನಡೆದರೂ, ಪಾಸ್ ಹಂಚಿಕೆ ವಿಚಾರದಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂದು ದೂರಿದರು. ಹಿಂದಿನ ವರ್ಷಗಳಲ್ಲಿ ಬಳಸುತ್ತಿದ್ದ ವಿಐಪಿ ಹಾಗೂ ವಿಐಐಪಿ ಪಾಸ್ ವ್ಯವಸ್ಥೆಯನ್ನು ಈ ಬಾರಿ ರದ್ದುಮಾಡಿ "ಗೋಲ್ಡನ್ ಪಾಸ್ " ಎಂಬ ಹೊಸ ಕ್ರಮವನ್ನು ಪ್ರಯೋಗ ಮಾಡಲಾಗಿದೆ, ಇದಕ್ಕೆ ಆರಂಭದಲ್ಲಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಈಗ ಅದೇ ವ್ಯವಸ್ಥೆ ವಿವಾದಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಹೇಳಿದರು.
ಬೇಲೂರು ತಾಲೂಕಲ್ಲಿ ಬಿಡದೇ ಸುರಿದ ಮಲೆ
ಕಳೆದ ವಾರದಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹೆಬ್ಬಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪಶು ಆಸ್ಪತ್ರೆ ಆವರಣ ಜಲಾವೃತವಾಗಿದ್ದು ವಿದ್ಯಾರ್ಥಿಗಳು ಹಾಗೂ ಪಶುಪಾಲಕರು ಗ್ರಾಮ ಪಂಚಾಯತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಕುಂಟುನೆಪ ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು ಶಾಶ್ವತ ಪರಿಹಾರಕ್ಕೆ ಸಂಬಂಧ ಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಮುಂದಾಗಿಲ್ಲ ಎಂದು ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನೋಡುಗರ ಮನಸೆಳೆದ ಶ್ವಾನಗಳ ಪ್ರದರ್ಶನ
ಹಾಸನ ಪೊಲೀಸ್ ಇಲಾಖೆಯ ತರಬೇತಿ ಪಡೆದ ಲಾಸಿ ನಾಯಿ ಪ್ರಥಮ ಪ್ರದರ್ಶನ ನೀಡಿತು. ಅದರ ಚುರುಕುತನ, ಆಜ್ಞೆ ಪಾಲನೆ ಹಾಗೂ ನೈಪುಣ್ಯ ಮೆಚ್ಚುಗೆಗೆ ಪಾತ್ರವಾಯಿತು. ಇದರ ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂದ ಸುಮಾರು ೮೦ಕ್ಕೂ ಹೆಚ್ಚು ವಿವಿಧ ತಳಿಯ ನಾಯಿಗಳು ಲ್ಯಾಬ್ರಡಾರ್‌, ಜರ್ಮನ್ ಶೆಪರ್ಡ್, ಡೋಬರ್ಮಾನ್, ಪೊಮೆರೇನಿಯನ್, ರಾಟ್‌ವೈಲರ್‌, ಹಸ್ಕಿ ಹಾಗೂ ಭಾರತೀಯ ತಳಿಯ ನಾಯಿಗಳು ತಮ್ಮ ಮಾಲೀಕರ ಮಾರ್ಗದರ್ಶನದಲ್ಲಿ ಪ್ರದರ್ಶನ ನೀಡಿದವು. ನಾಯಿಗಳ ಆರೈಕೆ, ಶಿಸ್ತು, ನಡವಳಿಕೆ, ಮೈಕಟ್ಟು ಮತ್ತು ಪ್ರದರ್ಶನ ಶೈಲಿಯ ಆಧಾರದ ಮೇಲೆ ನ್ಯಾಯಾಧೀಶರು ಮೌಲ್ಯಮಾಪನ ನಡೆಸಿದರು.
ಜೆಡಿಎಸ್ ಪ್ರತಿಭಟನೆಗೆ ನೈತಿಕತೆ ಇಲ್ಲ ಶಾಸಕ ಸ್ವರೂಪ್‌ಗೆ ಪ್ರೀತಂ ಗೌಡ ಟಾಂಗ್‌
ಹಾಸನಾಂಬೆ ಉತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಮೇಲೆ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರು ತೀವ್ರ ಟೀಕೆ ಮಾಡಿದ್ದಾರೆ. ಸ್ಥಳೀಯ ಶಾಸಕನಾಗಿ ಉತ್ಸವವನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ನೋಡಿಕೊಳ್ಳಬೇಕಾದವರು ವಿದೇಶದ ಪ್ರವಾಸ ಮುಗಿಸಿ ಉತ್ಸವದ ಹಿಂದಿನ ದಿನ ಮಾತ್ರ ಹಾಜರಾದರು. ಈಗ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ಮಾಡಿದರು.
ಹಾಸನಾಂಬೆ ದರ್ಶನ ಪಡೆದ ಶಿವರಾಜಕುಮಾರ್ ದಂಪತಿ

ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್‌ ಅವರು ಪತ್ನಿ ಗೀತಾ ಶಿವರಾಜಕುಮಾರ್‌ ಅವರೊಂದಿಗೆ ಭಾನುವಾರ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ತಾಯಿ ಹಾಸನಾಂಬೆಯ ದರ್ಶನ ಪಡೆದು ಪುನೀತರಾದರು 

ಹಾಸನಾಂಬೆ ದರ್ಶನ ಪಡೆದ ರಿಷಬ್‌ ಶೆಟ್ಟಿ

ಕಾಂತಾರ ಸಿನಿಮಾದ ಮೂಲಕ ದಾಖಲೆ ನಿರ್ಮಿಸಿದ ನಾಯಕ ನಟ ರಿಷಬ್ ಶೆಟ್ಟಿ ದಂಪತಿಗಳು ಭಾನುವಾರ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದೇ ವೇಳೆ ಶ್ರೀ ಸಿದ್ದೇಶ್ವರ ದೇವಾಲಯಕ್ಕೂ ತೆರಳಿದರು. 

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ಶ್ರವಣಬೆಳಗೊಳದ ಚಾರುಶ್ರೀ
ದೇವರ ಪ್ರಸಾದ, ಶ್ರೀಮಠದ ಫಲ ತಾಂಬೂಲ, ಪುಷ್ಪಮಾಲೆಯೊಂದಿಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿದ ಚಾರುಶ್ರೀಗಳು, ಎಚ್‌ಡಿಡಿ ಅವರ ಹಣೆ ಹಾಗೂ ತಲೆಗೆ ತಾವೇ ಗಂಧೋದಕ ಹಚ್ಚಿ ಆದಷ್ಟು ಬೇಗ ಮೊದಲಿನಂತಾಗಿ ಎಂದು ಹರಸಿದರು. ದೇವೇಗೌಡರಿಗೆ ದೇವರ ಪ್ರಸಾದ ನೀಡಿ, ಅವರ ತಲೆಯ ಮೇಲೆ ಹೂ ಇಟ್ಟು, ನಿಮ್ಮ ಆಯಸ್ಸು ಮತ್ತಷ್ಟು ವೃದ್ಧಿಯಾಗಲಿ, ನಿಮ್ಮಿಂದ ಜಿಲ್ಲೆ, ನಾಡು, ದೇಶಕ್ಕೆ ಇನ್ನಷ್ಟು ಅಮೂಲ್ಯ ಸೇವೆ ದೊರಕುವಂತಾಗಲಿ, ಆ ಶಕ್ತಿಯನ್ನು ಭಗವಾನ್ ಬಾಹುಬಲಿ ಸ್ವಾಮಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು. ಈ ವೇಳೆ ಕೈ ಮುಗಿದು ಗುರುವಂದನೆ ಸಲ್ಲಿಸಿದ ದೇವೇಗೌಡರು, ಜಿನೈಕ್ಯರಾದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಕೊಡುಗೆ, ಬಾಂಧವ್ಯವನ್ನು ಸ್ಮರಿಸಿದರು.
ಜಾತ್ರೋತ್ಸವಕ್ಕೆ ಜಾಲತಾಣದ ಅತಿಯಾದ ಬಳಕೆಯಿಂದ ಕಳಂಕ
ಈ ಬಾರಿ ಹಾಸನಾಂಬೆ ದರ್ಶನೋತ್ಸವ ಸುಗಮವಾಗಿ ನಡೆಯುತ್ತಿದೆ. ಧರ್ಮದರ್ಶನದ ಕ್ಯೂನಲ್ಲಿ ಬಂದವರಿಗೂ ಕೂಡ ಒಂದೆರೆಡು ಗಂಟೆಗಳಲ್ಲಿ ದರ್ಶನ ಆಗುತ್ತಿದೆ " ಎಂದು ಸಂದೇಶ ನೀಡುತ್ತಿದ್ದರು. ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ಕೂಡ ಪ್ರತಿನಿತ್ಯ ಇದೇ ವೆಬ್‌ಸೈಟಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ ಹಾಸನಾಂಬ ದರ್ಶನೋತ್ಸವ ಸುಲಲಿತವಾಗಿ ನಡೆಯುತ್ತಿದೆ. ಎಲ್ಲಾ ಕ್ಯೂಗಳಲ್ಲಿ ಕೂಡ ಸುಗಮ ದರ್ಶನ ಆಗುತ್ತಿದೆ ಎಂದು ನೀಡಿದ ಸಂದೇಶಗಳು ಹೊರ ಜಿಲ್ಲೆಯ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರೇರೇಪಿಸಿತು.
ಮನೆಯೊಳಗೆ ನುಗ್ಗಿದ ಖಾಲಿ ನಿವೇಶನದ ನೀರು
ಜೋರು ಮಳೆಯಿಂದ ಪಟ್ಟಣದ ಜೈನಿಗರ ಬೀದಿಯ ಖಾಲಿ ನಿವೇಶನದಲ್ಲಿ ಸಂಗ್ರಹವಾದ ಮಳೆ ನೀರು ಸರಾಗವಾಗಿ ಹೊರಗೆ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಮನೆ ನುಗ್ಗಿ ಆತಂಕ ಸೃಷ್ಠಿಸಿತು. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಏಕಾಏಕಿ ಮಂಜುನಾಥ್ ಎಚ್.ಎಸ್. ಎಂಬುವರ ಮನೆಗೆ ನುಗ್ಗಿ ಆತಂಕ ಸೃಷ್ಠಿಸಿದೆ. ಮನೆಯಲ್ಲಿ ಇದ್ದ ದಿನಸಿ ಪಾದಾರ್ಥಗಳು, ಮಕ್ಕಳ ಪುಸ್ತಕಗಳು, ಹಾಸಿಗೆ, ಹೊದಿಕೆ, ಪ್ರಾತೆಗಳು ಹಾಗು ದಿನಬಳಕೆ ವಸ್ತುಗಳು ನೀರಿನಲ್ಲಿ ನೆಂದು ಕೆಮ್ಮಣ್ಣಿನ ಕೆಸರು ತುಂಬಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 544
  • next >
Top Stories
ಕ್ಯಾನ್ಸರ್ ಕಾರಕ ಎನ್ನುವುದು ಅಡಕೆಗೆ ಅಂಟಿದ ಕಳಂಕ : ಬೆಳೆಗಾರರಲ್ಲಿ ಆತಂಕ
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌
ಹಣಕಾಸು ಯೋಜನೆ ಮಾಡಲು 7 ಎಐ ಟೂಲ್‌ಗಳು
ಕಾಂಗ್ರೆಸಲ್ಲಿ ನವೆಂಬರ್‌ ಕ್ರಾಂತಿ ಖಚಿತ : ಅಶೋಕ್‌
ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಕೊಡಿ : ನರೇಂದ್ರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved