• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗುಲಸಿಂದ ಕೆರೆಕೋಡಿ ಕಾಲುವೆ ನಿರ್ಮಾಣಕ್ಕೆ ಅನುದಾನ
ಗುಲಸಿಂದ ಗ್ರಾಮದಲ್ಲಿನ ರಾಘವೇಂದ್ರಸ್ವಾಮಿ ನೂತನ ಪೂಜಾ ಮಂದಿರದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಕೆರೆಕೋಡಿ ನೀರು ಸರಾಗವಾಗಿ ಹರಿಯಲು ಕಾಲುವೆ ನಿರ್ಮಾಣಕ್ಕೆ ೪೯ ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ಬಾಗೂರು ಮುಖ್ಯರಸ್ತೆಗೆ ಅಂದಾಜು ೩ ಲಕ್ಷ ರು. ವೆಚ್ಚ ಮಾಡಿ ಕಮಾನು ನಿರ್ಮಾಣ ಮಾಡಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ನೀಡಿದ್ದಾರೆ. ಗ್ರಾಮದ ದೇವಾಲಯಗಳ ಮುಖ್ಯ ಪ್ರವೇಶದ್ವಾರವಾಗಿದ್ದು ದೇವಾಲಯದ ಪ್ರಾಂಗಣದ ಸೌಂದರ್ಯ ಹೆಚ್ಚಲಿದೆ ಎಂದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ
ಬರಗಾಲದ ಪರಿಸ್ಥಿತಿಯ ಚಿತ್ರಣವನ್ನು ಉದಾಹರಣೆ ನೀಡುವುದರ ಮೂಲಕ ನಾವು ಅಳವಡಿಸಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಯು ಕೂಡ ಸಮತೋಲಿತ ಪರಿಸರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಶಿಕ್ಷಣ ನೀಡುವುದು ಅವಶ್ಯಕ ಎಂಬುದನ್ನು ತಿಳಿಸುತ್ತಾ, ಪ್ಲಾಸ್ಟಿಕ್ ಮುಕ್ತ ಸಮಾಜ, ಸಾವಯವ ಕೃಷಿಯ ಮಹತ್ವ, ಹಸಿರು ಕ್ರಾಂತಿಯ ಪಿತಾಮಹ ಡಾ. ಸ್ವಾಮಿನಾಥನ್ ಕೊಡುಗೆಯನ್ನು ವಿವರಿಸಿದರು.
ನಾಳೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ಗೆ ನಾಗರಿಕರ ಸನ್ಮಾನ
ಹಾಸನಾಂಬ ಕಲಾಕ್ಷೇತ್ರದಲ್ಲಿ ಜೂನ್ ೯ರ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ ಅವರಿಗೆ ಜಿಲ್ಲಾ ನಾಗರಿಕ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಹಾಸನದ ಹೆಮ್ಮೆಯ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ೨೦೨೫ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಕನ್ನಡ, ಕರ್ನಾಟಕ ಮತ್ತು ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿದೆ ಎಂದರು.
ರಾಜೀವ್‌ ಆಯುರ್ವೇದ ಕಾಲೇಜಲ್ಲಿ ಪರಿಸರ ದಿನಾಚರಣೆ
ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಎಂಡೋಸಲ್ಫನ್ ನಂತಹ ವಿಷಕಾರಿ ಅಂಶಗಳನ್ನು ಬಳಸುವುದರಿಂದ ಕ್ಯಾನ್ಸರ್, ಅಂಗವೈಕಲ್ಯದಂತ ಮಾರಕ ಕಾಯಿಲೆಗೆ ತುತ್ತಾಗುವುದರೊಂದಿಗೆ ಪ್ರಕೃತಿಯ ವಿನಾಶಕ್ಕೆ ಕಾರಣವಾಗಬಹುದು. ಕ್ಯುಬಾ ದೇಶದಲ್ಲಿ ಪರಿಸರ ಸ್ನೇಹಿ ವ್ಯವಸಾಯ ಮಾಡುವುದರಿಂದ ಪ್ರಕೃತಿಯ ವಿಕೋಪವಾಗುದನ್ನು ತಡೆಯುತ್ತಾರೆ. ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಸ್ವಂತ ವಾಹನ ಬಳಸುವುದರಿಂದ ಅತಿಯಾದ ಕಾರ್ಬನ್ ಮೋನೋಕ್ಸೈಡ್ ಹೊರಸೂಸಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವುದಲ್ಲದೆ ಪ್ರಕೃತಿಯ ತಾಪಮಾನವೂ ಹೆಚ್ಚಳವಾಗುವಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದರು.
ಮಸೀದಿಗಳಲ್ಲಿ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ
ಹಬ್ಬದ ಪ್ರಯುಕ್ತ ನಗರದ ಹಲವಾರು ಮಸೀದಿಗಳಲ್ಲಿ ಬೆಳಗಿನ ಮುಂಜಾನೆ ಪ್ರಾರ್ಥನೆ ಸಹ ಸಲ್ಲಿಸಲಾಗಿತ್ತು. ನಂತರ ನಗರದ ಹುಳಿಯಾರ್ ರಸ್ತೆಯಲ್ಲಿರುವ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಮುಸ್ಲಿಂ ಬಾಂಧವರು ಮೆರವಣಿಗೆಯ ಮೂಲಕ ಪ್ರಮುಖ್ಯ ರಸ್ತೆಗಳಲ್ಲಿ ಸಾಗಿ ಬಿ ಎಚ್ ರಸ್ತೆ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ನಜರ್ ಆಲಂ ಸಲಾಮಿ ಇವರ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಭೂಮಿಯನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಕಟಿಬದ್ಧರಾಗೋಣ
ಪ್ಲಾಸ್ಟಿಕ್‌ ಮುಕ್ತಗೊಳಿಸುವ ವಿಶ್ವ ಸಂದೇಶಕ್ಕೆ ನಾವೆಲ್ಲರೂ ಕಟಿಬದ್ಧರಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ರಕ್ಷಣೆಗೆ ನಾವೆಲ್ಲ ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.ಪ್ರಕೃತಿಯೇ ದೇವರು, ಅದನ್ನು ಆರಾಧಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು. ಅಭಿವೃದ್ಧಿ ಸಲುವಾಗಿ ಮರ ತೆರವುಗೊಳಿಸುವ ಬದಲಿಗೆ ಐದು ಗಿಡಗಳನ್ನು ನೆಟ್ಟು ಪ್ರಕೃತಿಗೆ ಕೊಡುಗೆಯಾಗಿ ನೀಡಬೇಕು ಎಂದರು.
ಬೇಲೂರಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಪರಿಣಾಮ ಕುರಿತು ಜಾಗೃತಿ
ವಲಯ ಅರಣ್ಯಾಧಿಕಾರಿಗಳಾದ ಶೈಲಾರವರು ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಭಾಗವಹಿಸಿ ಪರಿಸರ ಉಳಿಸುವ ಅರಣ್ಯದ ಮಹತ್ವದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಿದರು. ಗ್ರೀನರಿ ಟ್ರಸ್ಟಿನ ಕಾರ್ಯದರ್ಶಿ ಜ್ಞಾನಚಂದ್ರ ವಿಶ್ವ ಪರಿಸರ ದಿನದ ಆರಂಭಿಕ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಅನಾಹುತಗಳು ಓಝೋನ್ ಪದರದ ಶಿಥಿಲತೆ ಮತ್ತು ಸಸ್ಯ ಕೇವಲ ಸಾಂಕೇತಿಕವಾಗಿ ನಡೆದ ಅದನ್ನು ಪ್ರತಿನಿತ್ಯ ಪೋಷಿಸುವ ಕಾರ್ಯ ಆಗಬೇಕೆಂದು ಜೊತೆಗೆ ಶೂನ್ಯ ಪ್ಲಾಸ್ಟಿಕ್ ಬಳಕೆಯ ಘೋಷಣೆಯನ್ನು ಕೂಡ ಮಾಡಿ ಮನಮುಟ್ಟುವಂತೆ ಕಾರ್ಯಕ್ರಮದಲ್ಲಿ ಸಭಿಕರಿಗೆ ಮಾಹಿತಿ ಹಂಚಿ ಗಿಡಗಳನ್ನು ಕೊಟ್ಟರು.
ಪರಿಸರ ದಿನಾಚರಣೆ ನಿತ್ಯೋತ್ಸವವಾಗಬೇಕು
ಪರಿಸರ ದಿನಾಚರಣೆಗಳು ಇತ್ತೀಚಿನ ದಿನಗಳಲ್ಲಿ ಕೇವಲ ಆಚರಣೆಗೆ ಮಾತ್ರ ಸೀಮಿತವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ನಿತ್ಯೋತ್ಸವದ ಕಾಯಕವಾದಾಗ ಮಾತ್ರ ಅರ್ಥ ಬರುತ್ತದೆ ಎಂದರು. ಭೂಮಿಯ ಪರಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಕಣಗಳು ಸಂಗ್ರಹವಾಗುವುದರಿಂದ ಮಾನವರು, ವನ್ಯಜೀವಿಗಳ ಮತ್ತು ಅವುಗಳ ಅವಾಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ತೊಲಗಿಸಬೇಕು ಎಂಬ ಪ್ರಸಕ್ತ ವರ್ಷದ ಪರಿಸರ ದಿನದ ಘೋಷವಾಕ್ಯದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕು ಎಂದರು.
ಪ್ಲಾಸ್ಟಿಕ್ ಅಳಿಸಿ ಪರಿಸರ ಬೆಳೆಸಿ
ದೇಶದಲ್ಲಿ ಇಂದಿನ ಅಂಕಿಅಂಶದ ಪ್ರಕಾರ ಸರಾಸರಿ ೫ ಲಕ್ಷ ಗಿಡಮರಗಳು ಕಡಿಮೆಯಾಗಿದೆ ಎಂದು ಬೇಲೂರಿನ ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಎಸ್. ಶಶಿಕಲಾ ತಿಳಿಸಿದರು. ಇಂದಿನ ಲೆಕ್ಕಚಾರದ ಪ್ರಕಾರ ಗಿಡಮರಗಳನ್ನು ನಾಶ ಮಾಡಿ ಮಾನವ ತನಗೆ ಅನುಕೂಲಕ್ಕೆ ತಕ್ಕಂತೆ ನಿರ್ಮಾಣ ಮಾಡಿಕೊಳ್ಳುತ್ತಿರುವುದು ಅತ್ಯಂತ ದುರಂತವಾಗಿದೆ ಎಂದರು.
ಆಲೂರಿನ ಮಾರುಕಟ್ಟೆ ಸ್ಥಳಾಂತರಕ್ಕೆ ಚಿಂತನೆ
ಆಲೂರು ಪಟ್ಟಣದ ಆಸ್ಪತ್ರೆ ಮುಂಭಾಗ ಇರುವ ತರಕಾರಿ ಮಾರುಕಟ್ಟೆ ಹಳೆಕೋರ್ಟ್‌ ಸರ್ಕಲ್‌ನಲ್ಲಿರುವ ಹೀರೋ ಹೋಂಡ ಶೋರೂಂ ಪಕ್ಕಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ತಾಹಿರಾ ಬೇಗಂ ತಿಳಿಸಿದರು. ಮಾರುಕಟ್ಟೆ ಸ್ಟಳಾಂತರಕ್ಕೆ ಸುದೀರ್ಘ ಚರ್ಚೆ ನಡೆಸಿದ ಅಧ್ಯಕ್ಷರು ಹಾಗೂ ಸದಸ್ಯರು ಈ ಬಾರಿಯಾದರೂ ಮಾರುಕಟ್ಟೆ ಸ್ಥಳಾಂತರ ಮಾಡಬೇಕೆಂದು ಪಟ್ಟು ಹಿಡಿದರು. ಅನೇಕ ಬಾರಿ ಚರ್ಚೆ ನಡೆಸಿ ಎಷ್ಟೇ ಪ್ರಯತ್ನಪಟ್ಟರು ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಟ್ಟಣದಲ್ಲಿರುವ ಹೀರೋ ಹೋಂಡಾ ಶೋ ರೂಂ ಹತ್ತಿರ ಖಾಲಿ ಜಾಗವಿದ್ದು ಮಾರುಕಟ್ಟೆಗೆ ಯೋಗ್ಯವಾದ ಸ್ಥಳವಾಗಿದೆ ಎಂದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 440
  • next >
Top Stories
ಪೇದೆ ಅಭ್ಯರ್ಥಿಗಳ ವಯಸ್ಸು 33 ಕ್ಕೆ ಏರಿಸಲು ಕ್ರಮ : ಡಾ.ಪರಮೇಶ್ವರ್
ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ : ಎಚ್. ವಿಶ್ವನಾಥ್‌ ಭವಿಷ್ಯ
ಜೆಡಿಎಸ್‌ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ನಿಖಿಲ್‌ ನಾಳೆಯಿಂದ ರಾಜ್ಯ ಪ್ರವಾಸ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಒತ್ತು ಕೊಡಿ : ಖರ್ಗೆ
ಆಗುಂಬೆ ಘಾಟಿಯಲ್ಲಿ ಸೆ.30ರ ತನಕ ಭಾರಿ ವಾಹನ ಸಂಚಾರವಿಲ್ಲ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved