ಇಂದಿನಿಂದ ಐದು ದಿನ ಕಣಕಟ್ಟೆ ಕರಿಯಮ್ಮದೇವಿ ಜಾತ್ರೆಅಂಕುರಾರ್ಪಣೆಯೊಂದಿಗೆ ಮೂಲ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ರುದ್ರಾಭಿಷೇಕ, ಮಹಾಪೊಜೆ ನಂತರ ಶ್ರೀ ಕರಿಯಮ್ಮ ನವರು ಮಧುವಣಗಿತ್ತಿಯಾಗಲು ಪಕ್ಕದ ತಾಲೂಕು ಕಡೂರಿನ ಬಿಟ್ಟೇನಹಳ್ಳಿ ಗ್ರಾಮಕ್ಕೆ ತೆರಳಿ ಬೆಳಿಗ್ಗೆ ಉತ್ಸವದೊಂದಿಗೆ ಪುರ ಪ್ರವೇಶ, ಶ್ರೀ ಸುಕ್ಷೇತ್ರ ಕೆರೆಗೊಡಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿರವರ ಪಾದಪೂಜೆ ಅದ್ಧೂರಿ ಸ್ವಾಗತ, ಬೇವಿನ ಸೀರೆ, ಬಾಯಿಬೀಗ, ಹರಕೆ ಸೇವೆ, ಚೋಮನ ಕುಣಿತ,ಊರಿನ ಮೂರು ಕಣ್ಣು ಮಾರಮ್ಮ ದೇವಸ್ಥಾನದಿಂದ ಶ್ರೀ ಕರಿಯಮ್ಮ ದೇವಿ ದೇವಾಲಯದವರೆಗೆ ಉತ್ಸವದ ನಂತರ ರಾತ್ರಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಉಯ್ಯಾಲೆ ಉತ್ಸವ ಜರುಗಲಿದೆ.