ತನಿಖೆ ವರದಿ ಬಳಿಕ ಸತ್ಯಾಂಶ ಹೊರಬರುತ್ತೆಕಮಿಷನರ್ ಆಫೀಸ್, ಕೆಳಗಿನ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ರಾ, ಬೇಡ ಅಂದ್ರು ಏಕೆ ಹೋದರು, ಸಾಕಷ್ಟು ಗೊಂದಲಗಳಿವೆ, ಸಿಐಡಿ, ಸಿಒಡಿ ತನಿಖೆ ಮಾಡ್ತಾರೆ, ವರದಿ ಬಳಿಕ ಸತ್ಯಾಂಶ ಹೊರಗೆ ಬರುತ್ತೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಸ್ಟೇಡಿಯಂಗೆ ಹೋಗುವ ಮುಂಚೆ ಡೆತ್ ಆಗಿದ್ರೆ ಸಿಎಂಗೆ, ಸರ್ಕಾರಕ್ಕೆ ಹೇಳಬೇಕಾದದ್ದು ಪೊಲೀಸರ ಕರ್ತವ್ಯ, ಜವಾಬ್ದಾರಿ, ಜತೆಗೆ ಮುಖ್ಯಮಂತ್ರಿಗಳಿಗೆ ಮುಂಚೆಯೇ ಹೇಳಬೇಕಿತ್ತು, ಯಾಕೆ ಹೇಳಿಲ್ಲ ಎಂದು ಪ್ರಶ್ನಿಸಿ, ಇದು ಪೊಲೀಸರ ಮೇಲೆ ಬಂದ ಪ್ರಶ್ನೆಯಾಗಿದೆ. ಇದರ ಬಗ್ಗೆ ಸಿಐಡಿ, ಸಿಒಡಿ ಇನಿಖೆ ನಡೆಸಿದ ನಂತರ ಭೀಕರ ಕಾಲ್ತುಣಿತ ಪ್ರಕರಣದ ಬಗ್ಗೆ ಸತ್ಯಾಂಶ ತಿಳಿಯಲಿದೆ ಎಂದರು.