ಬಾಣಾವರ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನರಥೋತ್ಸವದ ನಿಮಿತ್ತ ಶ್ರೀ ಆಂಜನೇಯ ಸ್ವಾಮಿಯವರಿಗೆ ಅಭಿಷೇಕ ಗಂಗಾಸ್ಥಾನವನ್ನು ಮಾಡಿಸಲಾಯಿತು. ನಂತರ ಮಯೂರ ವಾಹನೋತ್ಸವ, ಶೇಷ ವಾಹನೋತ್ಸವವನ್ನು ನೆರವೇರಿಸಿ ಗುರುವಾರದಂದು ಗಣಪತಿ ಹೋಮ, ಆಂಜನೇಯ ಹೋಮ, ರಾಮಕಾರಕ ಹೋಮ, ಬ್ರಹ್ಮಹೋಮ, ರುದ್ರ ಹೋಮ, ಆಂಜನೇಯ ಸ್ವಾಮಿಯವರ ರಥಾಂಗ ಹೋಮ, ರಥ ಪ್ರತಿಷ್ಠಾಪನೆ ಮತ್ತು ಕಳಸಾಭಿಷೇಕವನ್ನು ನಡೆಸಿ ಗಜೇಂದ್ರ ಮೋಕ್ಷ ಗರುಡೋತ್ಸವವನ್ನುನಡೆಸಿ ರಾತ್ರಿ 9 ಗಂಟೆಗೆ ಕಲ್ಯಾಣೋತ್ಸವವನ್ನು ನೆರವೇರಿಸಲಾಯಿತು.