ಜಿಲ್ಲೆಯಾದ್ಯಂತ ವಿಜೃಂಭಣೆಯ ಅಂಬೇಡ್ಕರ್ ಜಯಂತ್ಯುತ್ಸವ ಸಮಾಜದಲ್ಲಿ ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢರಾಗಬೇಕು, ಸಂವಿಧಾನದ ಮೂಲಕ ನಮಗೆ ಬೇಕಾದಂತಹ ಹಕ್ಕುಗಳನ್ನು ಕೇಳುವ ಮನಸ್ಥಿತಿಯನ್ನು ಹೊಂದಬೇಕು. ಅದಕ್ಕೆ ಫಲದಕ್ಕದೆ ಹೋದಾಗ ಹೋರಾಟ ಮಾಡುವಂತಹ ಮನೋಭಾವವನ್ನ ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಅಂದಿನ ಕಾಲದಲ್ಲಿ ಅವರು ಪಟ್ಟಂತಹ ಶ್ರಮದಲ್ಲಿ ನಾವು ಶೇಕಡ ಒಂದರಷ್ಟು ಕೂಡ ಶ್ರಮಪಡಲು ಸಾಧ್ಯವಿಲ್ಲ, ಸಮಾನತೆ ಬರುವವರೆಗೂ ಸಂಘರ್ಷ ಅನಿವಾರ್ಯವಾಗಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಂದು ವರ್ಗಗಳಿಗೂ ಮೀಸಲಾತಿಯನ್ನು ಕೊಡದಿದ್ದರೆ ನಾವುಗಳು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ,