ದೇಶಕ್ಕಾಗಿ ತ್ಯಾಗ ಮಾಡಿದವರು ನಮಗೆ ಹೀರೋಗಳಾಗಬೇಕುಭಾರತದ ಗಡಿಯಲ್ಲಿ ವೀರ ಮರಣವನ್ನಪ್ಪುವ ಹಾಗೂ ವೀರಯೋಧರ ತಾಯಂದಿರು, ದೇಶ ಕಾಯುವ ವೀರ ಸೈನಿಕರು, ಮಣ್ಣಲ್ಲಿ ಮಣ್ಣಾಗಿ, ಮೈ ಬಣ್ಣ ಮಣ್ಣಿಗೆ ಕೊಟ್ಟು, ಮಣ್ಣಿನ ಬಣ್ಣ ತಾನು ತೆಗೆದುಕೊಳ್ಳುವ ಅನ್ನದಾತ ರೈತರು, ರಾಷ್ಟ್ರದ ಏಳಿಗೆ ಬಯಸಿ ರಾಷ್ಟ್ರಕ್ಕಾಗಿ ದುಡಿಯುವ ನಾಯಕರು ಹಾಗೂ ದೇಶವೇ ಹೆಮ್ಮೆಪಡುವಂತೆ ಮಾಡುವ ವಿಜ್ಞಾನಿಗಳು ನಮ್ಮ ಬದುಕಿನ ಹೀರೋಗಳಾಗಬೇಕೆಂದು ಮಲ್ಲದೇವರಪುರ ವಿರಕ್ತ ಮಠದ ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ ಸಲಹೆ ನೀಡಿದರು.