ಆಪರೇಷನ್ ಸಿಂದೂರ ಬೆಂಬಲಿಸಿ ಹಾವೇರಿಯಲ್ಲಿ ಸಂಭ್ರಮಪಹಲ್ಗಾಮ್ ದಾಳಿಯಲ್ಲಿ 26 ಹಿಂದೂ ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡು ದುಃಖದ ಪರಿಸ್ಥಿತಿಯಲ್ಲಿದ್ದಾರೆ. ಅವರ ಹಣೆಯ ಮೇಲಿನ ಕುಂಕುಮ ಕಸಿದುಕೊಂಡ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳನ್ನು ಅವರದೇ ನಾಡಿನಲ್ಲಿ ಹೆಡೆಮುರಿ ಕಟ್ಟಿ ಭಾರತದ ಹೆಣ್ಣುಮಕ್ಕಳ ಕುಂಕುಮಕ್ಕೆ ಗೌರವ ತರುವ ನಿಟ್ಟಿನಲ್ಲಿ ಆಪರೇಷನ್ ಸಿಂದೂರ ನಡೆಸಿರುವುದು ದೇಶದಲ್ಲಿರುವ ಕೋಟ್ಯಂತರ ಜನರಿಗೆ ಸಂತಸದ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಇಸಿದರು.