ದೂರದರ್ಶನ ಕೇಂದ್ರ ಮುಚ್ಚದಂತೆ ಕೇಂದ್ರದ ಮೇಲೆ ಒತ್ತಡ ತನ್ನಿ: ಕಮಕನೂರ್ ಆಗ್ರಹದಕ್ಷಿಣ ಭಾರತದ ಮೊಟ್ಟಮೊದಲ ದೂರದರ್ಶನ ಕೇಂದ್ರವೆಂಬ ಹೆಗ್ಗಳಿಕೆಯ ಕಲಬುರಗಿ ದೂರದರ್ಶನ ಕೇಂದ್ರದ ಪ್ರಸಾರ ಸ್ಥಗಿತಗೊಳಿಸಿ ಮುಚ್ಚಲು ಹೊರಟಿರುವ ಕೇಂದ್ರದ ನಡೆ ಖಂಡನೀಯ. ತಕ್ಷಣ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಈ ಬೆಳವಣಿಗೆ ತಡೆ ಹಿಡಿಯಬೇಕು, ಕೇಂದ್ರದ ಜೊತೆ ಮಾತುಕತೆ ನಡೆಸಬೇಕು ಎಂದು ಮೇಲ್ಮನೆಯಲ್ಲಿಂದು ಶೂನ್ಯ ವೇಳೆಯಲ್ಲಿ ಎಂಎಲ್ಸಿ ತಿಪ್ಪಣ್ಣ ಕಮಕನೂರ್ ಆಗ್ರಹಿಸಿದ್ದಾರೆ.