ಸೋಮವಾರಪೇಟೆ: ಬೆಂಗಳೂರು - ಮಂಗಳೂರಿಗೆ ಮುಂಜಾನೆ ವೇಳೆಗೆ ತಲುಪಲು ಸಾರಿಗೆ ಬಸ್ಸಿಲ್ಲದಿನೇದಿನೆ ಜನಸಂಖ್ಯೆ ಬೆಳವಣಿಗೆ ಹೊಂದುತ್ತಿರುವ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ಜನರು ಅನೇಕ ಕಾರ್ಯ ಚಟುವಟಿಕೆಗಳಿಗೆ ಮಂಗಳೂರು ಮತ್ತು ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಮುಂಜಾನೆ ವೇಳೆಗೆ ಮಂಗಳೂರು, ಬೆಂಗಳೂರಿಗೆ ಬಸ್ ಸೌಕರ್ಯವಿಲ್ಲದೆ 1 ದಿನದ ಕೆಲಸಕ್ಕೆ ಹೊರಟರೆ 2 ದಿನಗಳು ಬೇಕಾಗುತ್ತಿದೆ.