ರಾಜ್ಯ ಸರ್ಕಾರದಿಂದ ಕ್ಷೇತ್ರಕ್ಕೆ ಅನುದಾನ ಸಿಗುವ ಭರವಸೆ ಇಲ್ಲ- ಶಾಸಕ ದೊಡ್ಡನಗೌಡ ಪಾಟೀಲ್ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯಗೆ ಇದ್ದ ಲವಲವಿಕೆ ಈ ಅವಧಿಯಲ್ಲಿಲ್ಲ. ಅವರಿಗೆ ಇಬ್ಬರು, ಮೂವರು ಸೂಪರ್ ಸಿಎಂ ಇದ್ದರೂ ಇರಬಹುದು ಎಂದು ಅನಿಸುತ್ತದೆ. ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಯಲಬುರ್ಗಾ ಶಾಸಕರನ್ನು ಸಮಾಧಾನಪಡಿಸುವ ಉದ್ದೇಶದಿಂದ ಅಲ್ಲಿ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿದೆ. ಆದರೆ ಕುಷ್ಟಗಿ ಕ್ಷೇತ್ರಕ್ಕೆ ಏನೂ ನೀಡಿಲ್ಲ