ಸಿವಿಲ್ ವ್ಯಾಜ್ಯಗಳೇ ಮೇಲುಗೈ, ಭ್ರಷ್ಟಾಚಾರದ ದೂರುಗಳು ಮಂಕು..!ಎರಡು ದಿನಗಳ ಕಾಲ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಸಾರ್ವಜನಿಕ ದೂರು, ಕುಂದುಕೊರತೆ ವಿಚಾರಣೆ, ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭೂ ವಿವಾದ, ಒತ್ತುವರಿ, ಆಸ್ತಿ ವಿವಾದ, ಗ್ರಾಮ ಪಂಚಾಯ್ತಿಗಳಲ್ಲಿ ಅಕ್ರಮ ಖಾತೆ, ಅಕ್ರಮ ಇ-ಸ್ವತ್ತುಗಳಿಗೆ ಸಂಬಂಧಿಸಿದ ಪ್ರಕರಣಗಳು ಮೇಲುಗೈ ಸಾಧಿಸಿದ್ದವು.