ರಂಗಭೂಮಿ ಕಲೆ ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ: ಕೆರೆಹಳ್ಳಿ ಬಿ.ದೊರೆಸ್ವಾಮಿಕಲೆ ಎಲ್ಲರನ್ನೂ ಕೈ ಬಿಸಿ ಕರಿಯುತ್ತದೆ, ಆದರೆ ಕೆಲವರನ್ನ ಮಾತ್ರ ಆಯ್ಕೆ ಮಾಡುತ್ತದೆ. ಈ ಕಲೆ ಅಳವಡಿಸಿಕೊಂಡರೆ ಯಾವುದೇ ದುಶ್ಚಟಕ್ಕೆ ಬಲಿಯಾಗದೆ, ಒಳ್ಳೆಯ ಮಾರ್ಗದಲ್ಲಿ ನಡೆಯಬಹುದು, ಆದ್ದರಿಂದ ಈ ಶಿಬಿರವನ್ನು ಮಕ್ಕಳು ಈಗ ಬೇಸಿಗೆ ರಜೆಯಲ್ಲಿ ಇರುವುದರಿಂದ ರಂಗಭೂಮಿ ಕಲೆ, ಹಾಡುಗಾರಿಕೆ, ಅಭಿನಯ, ವಾಕ್ ಚಾತುರ್ಯ ಹಾಗೂ ಶ್ರದ್ಧೆ ಆಸಕ್ತಿ ಹೇಗಿರಬೇಕು ಎಂಬುದರ ಅರಿವು ಮಕ್ಕಳಿಗೆ ಮೂಡಿಸಿ ಮುಂದಿನ ಪೀಳಿಗೆಗೆ ರಂಗಭೂಮಿ ಕಲೆ ಉಳಿಸಬೇಕು, ಬೆಳೆಸಬೇಕು.