ಭ್ರಷ್ಟಾಚಾರ, ಬೆಲೆ ಏರಿಕೆ, ಸಾಲ ಮಾಡಿದ್ದು ನಿಮ್ಮ ಭರವಸೆ ಆಗಿತ್ತೆ?: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅಧಿಕಾರ ದುರುಪಯೋಗಪಡಿಸಿಕೊಂಡು ವಿಪಕ್ಷ ನಾಯಕರನ್ನು ಬೆದರಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಬೆಳಗಾವಿಯಲ್ಲಿ ನನ್ನನ್ನು ಬೆದರಿಸಲು ಮುಂದಾದರು. ಕಲ್ಬುರ್ಗಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಅದನ್ನು ನಾನು ಕಟುವಾಗಿ ಟೀಕಿಸುತ್ತೇನೆ. ಆನೆ ಹೋಗುತ್ತಿರುತ್ತೆ ನಾಯಿ ಬೊಗಳುತ್ತೆ, ಆಕಾಶಕ್ಕೆ ಉಗಿದರೆ ಅವನ ಮುಖಕ್ಕೆ ಬೀಳುವುದು ಎಂಬುದು ಸಾಮಾನ್ಯ ಪದ ಬಳಕೆ. ಇದಕ್ಕೆ ಗುಂಡಾಗಿರಿ ಮಾಡುವುದೇ? ಇದಕ್ಕೀಗ ಜನ ಉತ್ತರ ಕೊಡುತ್ತಾರೆ.