• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಯುವಜನರೇ ಹಾನಿಕಾರಕ ವಸ್ತುಗಳ ಬಳಕೆ ಮಾಡದಿರಿ
ಪ್ರತಿಯೊಬ್ಬರಿಗೂ ಸದೃಢ ದೇಹ, ಸ್ವಚ್ಛ ಮನಸ್ಸು, ಉತ್ತಮ ಚಿಂತನೆಗಳು ಬಹುಮುಖ್ಯ. ಆದರೆ, ಕೆಲವರು ಅತಿ ಕಡಿಮೆ ಸಮಯದಲ್ಲಿ ದೇಹದ ಶಕ್ತಿ, ಸಾಮರ್ಥ್ಯ ಹಾಗೂ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಾನಿಕಾರಕ ವಸ್ತುಗಳ ಬಳಕೆ ಮಾಡಬೇಡಿ ಎಂದು ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ. ವಿರೂಪಾಕ್ಷ ಹೇಳಿದ್ದಾರೆ.
ಸದಸ್ಯರೇ ಅಲ್ಲದವರಿಗೆ ನಿವೇಶನ: 16ರಿಂದ ಅಹವಾಲು ಸ್ವೀಕಾರ
ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 2006 ರಿಂದ 2014 ರವರೆಗೆ ನಿವೇಶನಗಳನ್ನು ಸದಸ್ಯರಲ್ಲದವರಿಗೆ ಮಾರಾಟ ಮಾಡಲಾಗಿದೆ. ಈ ಅಕ್ರಮದ ವಿಚಾರಣೆ ನಡೆದು 74 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಾಗಿದೆ. ಈ ಹಿನ್ನೆಲೆ ಜ.16 ರಿಂದ 19ರವರೆಗೆ 4 ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಭದ್ರಾವತಿಯಲ್ಲಿ ಹೇಳಿದ್ದಾರೆ.
ಬೈಕ್ ವ್ಹೀಲಿಂಗ್ ಮಾಡಿದ್ದ ಯುವಕನಿಗೆ 15,500 ರು. ದಂಡ
ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿ, ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡಿದ್ದ ಯುವಕನಿಗೆ ಕೋರ್ಟ್‌ ₹15,500 ದಂಡ ವಿಧಿಸಿದೆ. ಅಲ್ಲದೇ, ಆತನ ಸಾಹಸಕ್ಕೆ ಸಹಕರಿಸಿ, ವಿಡಿಯೋ ಚಿತ್ರೀಕರಣ ಮಾಡಿದ್ದಾತನಿಗೂ ₹5000 ದಂಡ ವಿಧಿಸಿ, ಆದೇಶ ನೀಡಿದೆ.
ಜಯಪ್ಪ ಹೆಸರಲ್ಲೇ ಬಯಲು ರಂಗಮಂದಿರ: ಸಚಿವ ಅಭಯ
ಒಂದು ಶಾಲೆ ಬೆಳೆಯುವಲ್ಲಿ ಶಿಕ್ಷಕರು, ಮುಖ್ಯಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ. ಅಂಥ ಶಿಕ್ಷಕರಿಗೆ ಗೌರವ ಕೊಡುವುದು ಎಲ್ಲರ ಕರ್ತವ್ಯ. ನನಗೆ ಯಾರನ್ನು ದ್ವೇಷ ಮಾಡುವ ಅಭ್ಯಾಸವಿಲ್ಲ. ಚನ್ನಾಗಿದ್ದ ರಂಗಮಂದಿರವನ್ನು ಹೊಸದಾಗಿ ಕಟ್ಟುತ್ತೇವೆ ಎಂದು ಸುಳ್ಳು ಹೇಳಿ ಕೆಡುವಿದ್ದನ್ನು ದ್ವೇಷ ಮಾಡುತ್ತೇನೆ. ಆದಷ್ಟು ಬೇಗ ದೊಡ್ಡ ಪ್ರಮಾಣದಲ್ಲಿ ನಿವೃತ್ತ ಪ್ರಾಂಶುಪಾಲ ಎಚ್‌.ಜಯಪ್ಪ ಅವರ ಹೆಸರಲ್ಲೇ ಬಯಲು ರಂಗಮಂದಿರ ಕಟ್ಟುತ್ತೇವೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಆನವಟ್ಟಿ ಸಮಾರಂಭದಲ್ಲಿ ಭರವಸೆ ನೀಡಿದ್ಧಾರೆ.
ರೋಟರಿ ಮಾಜಿ ಅಧ್ಯಕ್ಷರು ಅನುಭವವನ್ನು ಅಮೃತವಾಗಿಸಲಿ
ರೋಟರಿ ಕ್ಲಬ್‌ ಸಮಾಜ ಸೇವೆಯಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದೆ. ಎಲ್ಲ ಕ್ಷೇತ್ರಗಳ ಸೇವಾ ಕಾಳಜಿ ಜನರ ಹೊಂದಿರುವ ಸಂಸ್ಥೆ. ಆದ್ದರಿಂದ ರೋಟರಿ ಕ್ಲಬ್‌ ಅಧ್ಯಕ್ಷರು ತಮ್ಮ ಒಂದು ವರ್ಷದ ಆಡಳಿತದ ಅವಧಿಯ ಅನುಭವವನ್ನು ಅಮೃತದಂತೆ ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು ಎಂದು ರೋಟರಿ ಜಿಲ್ಲೆ 3170ದ ಮಾಜಿ ಗವರ್ನರ್ ಡಾ. ಪ್ರಾಣೇಶ್ ಜಾಗೀರ್ ದಾರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಆರ್ಥಿಕ ಭವಿಷ್ಯ ಭದ್ರತೆ ಯುವನಿಧಿ ಉದ್ದೇಶ: ಸಂಗಮೇಶ್ವರ್
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಜ.12ರಂದು ಶಿವಮೊಗ್ಗದಲ್ಲಿ ಮಹತ್ವಾಂಕಾಕ್ಷೆಯ ಯುವನಿಧಿ ಯೋಜನೆ ಜಾರಿಯಾಗುತ್ತಿದೆ. ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ ಎಂದು ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್‌ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಆಶೀರ್ವಾದಿಸಲು ಬನ್ನಿ: ಪ್ರಸನ್ನಕುಮಾರ್‌
ಕಾಂಗ್ರೆಸ್ ಸರ್ಕಾರವು ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ 4 ಗ್ಯಾರಂಟಿಗಳು ಈಡೇರಿ, ಜನತೆ ಅವುಗಳ ಪ್ರಯೋಜನ ಪಡೆಯುತ್ತಿದ್ದಾರೆ. ಈಗ 5ನೇ ಗ್ಯಾರಂಟಿ ಯುವನಿಧಿಗೆ ಜ.12ರಂದು ಶಿವಮೊಗ್ಗದಲ್ಲಿ ಮುಹೂರ್ತ ಫಿಕ್ಸ್‌ ಆಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಜನತೆ ಇನ್ನಷ್ಟು ಹೆಚ್ಚಿನ ಆಶೀರ್ವಾದ ಮಾಡಲು ತಪ್ಪದೇ ಬನ್ನಿ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಪ್ರಸನ್ನಕುಮಾರ್ ಶಿಕಾರಿಪುರದಲ್ಲಿ ಹೇಳಿದ್ದಾರೆ.
ಅರ್ಹರಿಗೆ ಶಾಸಕರೂ ಯುವನಿಧಿ ತಲುಪಿಸಬೇಕು: ಕಿಮ್ಮನೆ ರತ್ನಾಕರ್‌
ಜ.12ರಂದು ಯುವನಿಧಿಗೆ ಅದ್ಧೂರಿ ಚಾಲನೆ ನೀಡಿ, ಯುವಮತಗಳ ಸೆಳೆಯುವ ಕಾಂಗ್ರೆಸ್‌ ಸರ್ಕಾರದ ದೂರದೃಷ್ಟಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಧಿಕವಾಗಿ ಶ್ರಮಿಸುತ್ತಿದ್ದಾರೆ. ರಾಜ್ಯ ಸೇರಿದಂತೆ, ಜಿಲ್ಲೆಯ ವಿವಿಧೆಡೆ ಶಾಸಕರು, ಸಚಿವರು, ಮಾಜಿ ಜನಪ್ರತಿನಿಧಿಗಳೆಲ್ಲ ಯುವನಿಧಿ ಜಪ ಮಾಡುತ್ತಿದ್ದಾರೆ. ತೀರ್ಥಹಳ್ಳಿಯಲ್ಲೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಮಾತನಾಡಿ, ಸಮಾರಂಭಕ್ಕೆ ಫಲಾನುಭವಿಗಳನ್ನು ಕರೆ ತರಲು 2 ಸಾವಿರ ಬಸ್‍ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅತಿ ಹೆಚ್ಚಿನ ಯುವಜನರು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಅರ್ಹರನ್ನು ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ಮಾಮ್ಕೋಸ್‌ ಷೇರುದಾರರ ಸಭೆ ಕುರಿತ ದಿನೇಶ್‌ ಆರೋಪ ಸತ್ಯಕ್ಕೆ ದೂರ
ಮಾಮ್ಕೋಸ್‌ ಷೇರುದಾರರ ಸಭೆ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದು ಸೇರಿದಂತೆ ಮಾಮ್ಕೋಸ್‌ ಕೋಸ್ ಆಡಳಿತ ಮಂಡಳಿ ವಿರುದ್ಧ ಸದಸ್ಯ ದಿನೇಶ್‌ ಕಡ್ತೂರು ಮಾಡಿರುವ ಹಲವು ಆರೋಪಗಳು ಸತ್ಯಕ್ಕೆ ದೂರವಾಗಿವೆ. ಸಂಘದ ಬೈಲಾ ತಿದ್ದುಪಡಿಯನ್ನು ಸರ್ಕಾರ ತಿರಸ್ಕರಿಸುವ ಆದೇಶದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿದ್ದಾರೆ. ಮಾಮ್ಕೋಸ್‌ಗೆ ಸೇರಬೇಕಾದ ಈ ದಾಖಲೆ ಸಂಸ್ಥೆಗೆ ದೊರಕದೇ ದಿನೇಶ್‌ ಕಡ್ತೂರ್‌ಗೆ ಹೇಗೆ ಸಿಕ್ಕಿದೆ ಎಂಬುದು ಷೇರುದಾರರ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಸಂಸ್ಥೆ ಕಾನೂನು ಹೋರಾಟದ ಕುರಿತು ಕೂಡ ಯೋಚಿಸುತ್ತಿದೆ ಎಂದು ಮಾಮ್ಕೋಸ್‌ ಉಪಾಧ್ಯಕ್ಷ ಎಚ್‌.ಎಸ್‌. ಮಹೇಶ್ ಹುಲ್ಕುಳ್ಳಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಮೀನುಗಾರಿಕೆ, ಮತ್ಸ್ಯೋದ್ಯಮದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ
ಮೀನುಗಾರಿಕೆ ಅತ್ಯಂತ ಲಾಭಾದಾಯಕ. ಈ ವೃತ್ತಿ ಅಷ್ಟೇ ಅಪಾಯಕಾರಿಯೂ ಹೌದು. ಈ ಹಿನ್ನೆಲೆ ಮೀನುಗಾರರು, ಮೀನು ವ್ಯವಹಾರಸ್ಥರು ನೈಪುಣ್ಯತೆ ಜತೆಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಶಿಕಾರಿಪುರದಲ್ಲಿ ಹೇಳಿದ್ದಾರೆ.
  • < previous
  • 1
  • ...
  • 414
  • 415
  • 416
  • 417
  • 418
  • 419
  • 420
  • 421
  • 422
  • ...
  • 490
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved