ಸಂಸ್ಕಾರ ತಂದೆ, ಗುರುಗಳಿಂದ ಪಾರಂಪರಿಕವಾಗಿ ದೊರೆಯುವ ವಿದ್ಯೆ: ಡಾ.ಶಶಾಂಕ ಹತ್ವಾರ್ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮ ನಡೆಯಿತು. ವೇದಾಂತ ಹಾಗೂ ಯೋಗ ಪ್ರವೀಣ ಡಾ.ಶಶಾಂಕ ಹತ್ವಾರ್ ‘ಮಂಡೂಕ ಉಪನಿಷತ್ತು’ ಕುರಿತು ಉಪನ್ಯಾಸ ನೀಡಿದರು.