ಘೋಷಣೆ ಬೆಟ್ಟದಷ್ಟು, ಈಡೇರಿದ್ದು ಬೆರಳೆಣಿಕೆಯಷ್ಟುಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ಜಿಲ್ಲೆಗೆ ಘೋಷಣೆಯಾಗಿದ್ದ ಹಲವು ಯೋಜನೆಗಳು ಕೇವಲ ಕಡತಕ್ಕಷ್ಟೇ ಸೀಮಿತ ಎಂಬಂತಾಗಿವೆ. ಅವುಗಳಲ್ಲಿ ಕಳೆದ ಬಜೆಟ್ನಲ್ಲಿ ಹೊಸ ಯೋಜನೆಗಳು, ಹಳೆಯ ಯೋಜನೆಗಳ ಪೂರ್ಣಗೊಳಿಸುವಿಕೆ ಸೇರಿದಂತೆ ಜಿಲ್ಲೆಗೆ ಹತ್ತಾರು ಯೋಜನೆಗಳನ್ನು ಘೋಷಿಸಲಾಗಿತ್ತು. ಘೋಷಣೆಯಾದ ಬೆಟ್ಟದಷ್ಟು ಯೋಜನೆಗಳಲ್ಲಿ ಈಡೇರಿದ್ದು ಮಾತ್ರ ಬೆರಳೆಣಿಕೆಯಷ್ಟು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಅಭಿವೃದ್ಧಿಯ ಯೋಜನೆಗಳೇ ಕುಸಿತ ಕಂಡಿವೆ. ಘೋಷಣೆಯಾಗಿದ್ದ ಸಾಕಷ್ಟು ಯೋಜನೆಗಳಿಗೆ ಸಮರ್ಪಕ ಅನುದಾನ ಬಾರದ್ದರಿಂದ ಬಹುತೇಕ ಯೋಜನೆಗಳು ಕಡತದಲ್ಲೇ ಉಳಿದುಕೊಂಡಿವೆ.