ರೈತರ ಅನುಕೂಲಕ್ಕೆ ಸಾಲ ನೀಡಲು ಯೋಜನೆ ರೂಪಿಸಿದೆಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ವಿಜಯಪುರ ಡಿಸಿಸಿ ಬ್ಯಾಂಕ್ ₹60 ಸಾವಿರ ಷೇರು ಬಂಡವಾಳದೊಂದಿಗೆ ಆರಂಭವಾಗಿ ಇಂದು ₹13 ಸಾವಿರ ಕೋಟಿ ವಹಿವಾಟು ಹೊಂದಿದೆ. ರೈತರ ಬದುಕು ಹಾಸನಾಗಿಸಲು ಶೂನ್ಯ ಬಡ್ಡಿ ದರ ಸಾಲ, ವ್ಯಾಪಾರ, ಮಹಿಳೆಯರ ಸ್ವಸಹಾಯ ಗುಂಪುಗಳಿಗೆ, ಹೈನುಗಾರಿಕೆ ಹಾಗೂ ರೈತರ ಅನುಕೂಲಕ್ಕಾಗಿ ತೋಟದ ಮನೆ ಕಟ್ಟಡ ನಿರ್ಮಾಣಕ್ಕೆ ಸಾಲ ನೀಡಲು ಯೋಜನೆ ರೂಪಿಸಿದ್ದಾಗಿ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.