ಶತಮಾನಗಳಲ್ಲಿ ಸಾಹಿತ್ಯದ ಆಯಾಮ ಬದಲುಕನ್ನಡಪ್ರಭ ವಾರ್ತೆ ತಾಂಬಾ ಕನ್ನಡ ಸಾಹಿತ್ಯ ಬೇರೆ ಬೇರೆ ಶತಮಾನಗಳಲ್ಲಿ ತನ್ನ ಆಯಾಮಗಳನ್ನು ಬದಲಿಸುತ್ತ ಬಂದಿದೆ. ಇದರಲ್ಲಿ ಪ್ರವಾಸ ಸಾಹಿತ್ಯವೂ ಒಂದಾಗಿದ್ದು, ವ್ಯಕ್ತಿಯ ಅನುಪಸ್ಥಿತಿಯಲ್ಲಿ ಆ ಪ್ರದೇಶದ ವಸ್ತುನಿಷ್ಠ ಜ್ಞಾನ ನೀಡುವದರ ಜೊತೆಗೆ ಅಲ್ಲಿಯ ಕಲೆ, ಸಾಹಿತ್ಯ, ಸಂಸ್ಕೃತಿ ಸಂಪ್ರದಾಯದ ಆಚರಣೆಗಳ ಕುರಿತು ಅಪಾರ ಜ್ಞಾನ ನೀಡುತ್ತದೆ ಎಂದು ಸಾಹಿತಿ ಡಾ.ಸಿದ್ದಣ್ಣಾ ಉತ್ನಾಳ ಹೇಳಿದರು.