ತೊಟ್ಟಿಲ ತೂಗುವ ಹೆಣ್ಣು ಜಗತ್ತನ್ನೇ ತೂಗುತ್ತಾಳೆಕನ್ನಡಪ್ರಭ ವಾರ್ತೆ ತಾಳಿಕೋಟೆ ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ ಮಹಿಳೆಯರ ಸ್ಥಾನಮಾನಗಳ ಕುರಿತು ಹಾಗೂ ಆಧ್ಯಾತ್ಮದ ಚಿಂತನೆ ಕುರಿತು ತಿಳುವಳಿಕೆ ನೀಡಿದ್ದರೂ ಸಾವಿತ್ರಿಬಾಯಿ ಫುಲೆ ಅಂತವರು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ್ದು, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ದುಡಿದು ತೋರಿಸಿದ ಅಸಂಖ್ಯಾತ ಮಹಿಳೆಯರು ನಮ್ಮ ರಾಜ್ಯದಲ್ಲಿಯೂ ಇದ್ದಾರೆ ಎಂದು ಕುಂಟೋಜಿಯ ಭಾವೈಕ್ಯತಾ ಮಠದ ಶ್ರೀಗುರು ಚನ್ನವೀರ ಶೀವಾಚಾರ್ಯರು ನುಡಿದರು.