ಗಣೇಶ ಪ್ರತಿಷ್ಠಾಪಿಸಿ ತಿಲಕರು ಒಗ್ಗಟ್ಟು ಪ್ರದರ್ಶಿಸಿದ್ದರುಕನ್ನಡಪ್ರಭ ವಾರ್ತೆ ತಾಳಿಕೋಟೆ ನಮ್ಮ ಧರ್ಮ ಗುಣವನ್ನು ಆಧರಿಸಿಸುವ ಕಾರ್ಯ ಮಾಡುತ್ತದೆ. ಆ ಗುಣಕ್ಕೆ ಸನಾತನ ಧರ್ಮವೆಂದು ಕರೆಯಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಹೇಳಿದರು. ಪಟ್ಟಣದ ಹಿಂದೂ ಮಹಾ ಗಣಪತಿ ಮಹಾ ಮಂಡಳಿ ಏರ್ಪಡಿಸಿದ್ದ ಭವ್ಯ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಹುನ್ನಾರ ನಡೆದಿವೆ. ಹಿಂದೂ ಶಬ್ದ ಕೇಳಿದರೆ ಕೆಲವರಿಗೆ ವಾಂತಿಯಾಗುತ್ತದೆ.