ನೌಕರರು ಕರ್ತವ್ಯದಲ್ಲಿ ಜನರ ವಿಶ್ವಾಸ ಗಳಿಸಿಕನ್ನಡಪ್ರಭ ವಾರ್ತೆ ಇಂಡಿ ಸಂವಿಧಾನದ ಮೂಲ ಆಶಯದಂತೆ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ, ಪತ್ರಿಕಾರಂಗ ತಮ್ಮ ಕಾರ್ಯವನ್ನು ಪ್ರಾಮಾಣಿಕತೆ, ಶ್ರದ್ದೆಯಿಂದ ನಿರ್ವಹಿಸಿದರೆ ಪ್ರಪಂಚದಲ್ಲಿ ದೇಶ ಉನ್ನತ ಸ್ಥಾನದಲ್ಲಿ ಸಾಗುತ್ತದೆ. ಯಾವುದಾದರೂ ಒಂದು ಅಂಗ ವಿಫಲವಾದರೆ ದೇಶ, ಸಮುದಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನೌಕರರು ಜನರ ವಿಶ್ವಾಸವನ್ನು ಗಳಿಸಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.