ಕಾರ್ಯಕರ್ತರಿಗೆ ವಂಚಿಸುವವರನ್ನು ದೂರವಿಡಿಕನ್ನಡಪ್ರಭ ವಾರ್ತೆ ಇಂಡಿ ಪಕ್ಷಕ್ಕೆ ನಿಷ್ಠಾವಂತ ಶಾಸಕರು ಆಯ್ಕೆಯಾಗುವ ಅವಶ್ಯಕತೆ ಇದೆ. ಪಕ್ಷವನ್ನು ರಾಜಕೀಯವಾಗಿ ಬಳಸಿಕೊಂಡು, ಉನ್ನತ ಸ್ಥಾನಮಾನ, ಹುದ್ದೆಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿ, ಪಕ್ಷದ ವರಿಷ್ಠರಿಗೆ, ನಂಬಿದ ನಿಷ್ಠಾವಂತ ಕಾರ್ಯಕರ್ತರಿಗೆ ವಂಚಿಸಿ ಮತ್ತೊಂದು ಪಕ್ಷಕ್ಕೆ ಹೋಗುವವರು ಇದ್ದಾರೆ. ಅಂತವರನ್ನು ದೂರ ಇಡಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.