ರುದ್ರಪಟ್ಟಣದ ಸಂಗೀತೋತ್ಸವಕ್ಕೆ ಮಾಜಿ ಶಾಸಕ ಎಟಿಆರ್‌ ಶ್ಲಾಘನೆ

May 24 2025, 12:23 AM IST
ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚದ ಐತಿಹಾಸಿಕ ಕ್ಷೇತ್ರವಾಗಿದೆ. ಜಗತ್ತಿನ ಮೂಲೆ ಮೂಲೆಗಳಲ್ಲಿ ಸ್ಥಳೀಯ ಶಾಸ್ತ್ರೀಯ ಸಂಗೀತ ಸಂಸ್ಕೃತಿಯೊಂದಿಗೆ ಬೆರೆತು ಆತ್ಮೀಯವಾಗಿ ಹಿಡಿಯಬಲ್ಲ ಸಂಗೀತ ಸಾಧನವನ್ನು ವಿದ್ವಾನ್ ಆರ್‌.ಕೆ. ಪದ್ಮನಾಭ ಅವರು 22 ವರ್ಷಗಳಿಂದ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ನಡೆಸಿಕೊಂಡು ಬರುತ್ತಿರುವುದಕ್ಕೆ ಸದನ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಡಾ. ಎ.ಟಿ. ರಾಮಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತ ಭಾಷೆಯನ್ನು ಜಗತ್ತಿನ ಮೂಲೆಮೂಲೆಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ತಮ್ಮನ್ನು ತೊಡಗಿಸಿಕೊಂಡು ಜನಜನಿತವಾಗಿದ್ದಾರೆ. ಇಂತಹ ವಿದ್ವಾಂಸರು ನಮ್ಮ ರುದ್ರಪಟ್ಟಣದಲ್ಲಿರುವುದು ಹೆಮ್ಮೆಯ ವಿಷಯ ಎಂದು ಡಾ. ಎ.ಟಿ. ರಾಮಸ್ವಾಮಿ ಬಣ್ಣಿಸಿದರು.