ಕಠಿಣ ಪರಿಶ್ರಮದಿಂದ ಗ್ರಾಹಕರ ಸಂತೃಪ್ತಿ: ಗುರುಸಿದ್ದೇಶ್ವರಶ್ರೀಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ: ಸಹನೆ, ಸನ್ನಡತೆ, ಸೇವಾ ಬದ್ದತೆ ಮತ್ತು ಗ್ರಾಹಕ ಸ್ನೇಹಿ ಗುಣಗಳಿಂದ ಯಾವುದೇ ಉದ್ಯಮ ಯಶಸ್ಸು ಕಾಣುವುದು ಶತಃಸಿದ್ದ. ಪ್ರಾಮಾಣಿಕತೆ, ದಣಿವರಿಯದ ಕೆಲಸ, ಗ್ರಾಹಕರ ಮುಖದಲ್ಲಿನ ದಣಿವು ಕಾಣದ ಪ್ರಸನ್ನವದನ ಮತ್ತು ಸೇವಾ ಕಿಂಕರತೆ ಗುಣಗಳನ್ನು ಅಳವಡಿಸಿಕೊಂಡಲ್ಲಿ ಯಶಸ್ಸಿಗೇರಲು ಸಾಧ್ಯ ಎಂಬುದನ್ನು ಅಭಿಯಂತರ ಗುರುರಾಜ ಹೊರಟ್ಟಿ ನಿದರ್ಶನರಾಗಿದ್ದಾರೆಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರಶ್ರೀ ನುಡಿದರು