ಬಾಗಲಕೋಟೆ ಹಸಿರು ಕೋಟೆ ಮಾಡುವ ಸಂಕಲ್ಪ: ಎಸ್.ಬಿ. ಗೌಡರಬಾಗಲಕೋಟೆಯನ್ನು ಹಸಿರು ಕೋಟೆಯನ್ನಾಗಿ ಮಾಡುವುದು ನಮ್ಮ ಸಂಕಲ್ಪವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಪರಿಸರ ಬಳಗ ಶ್ರಮ ವಹಿಸುತ್ತದೆ. ಅದಕ್ಕಾಗಿ ನಗರದಲ್ಲೆಡೆ ಪರಿಸರದ ಕುರಿತು ಅರಿವು ಮೂಡಿಸುವುದರ ಜೊತೆಗೆ ಮನುಷ್ಯನ ಸುಖ-ಸಂತೋಷ ಪ್ರಕೃತಿಯಲ್ಲಿ ಅಡಗಿದ್ದು, ಪರಿಸರ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದು ಪರಿಸರ ಬಳಗದ ಅಧ್ಯಕ್ಷ ಹಾಗೂ ಪ್ರಾರ್ಥನಾ ಪಿ.ಯು. ಕಾಲೇಜಿನ ಅಧ್ಯಕ್ಷ ಎಸ್.ಬಿ. ಗೌಡರ ಹೇಳಿದರು.