ಹೊಸ ಪೀಠ ಇಲ್ಲ, ಮೂಲಪೀಠದಿಂದಲೇ ನಿರ್ವಹಣೆ:ಧರೆಪ್ಪ ಸಾಂಗ್ಲಿಕರಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯಿಂದ ಹೊಸ ಪೀಠ ರಚನೆಯಾಗದು. ಬದಲಾಗಿ ಮೂಲಪೀಠವೇ ನಿರ್ವಹಣೆಯಾಗಲಿದ್ದು, ಇದಕ್ಕಾಗಿ ಕೂಡಲಸಂಗಮದಲ್ಲಿಯೇ ಭಕ್ತರಿಂದ ಸ್ಥಳಾವಕಾಶಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ತಿಳಿಸಿದರು.