ಪವರ್ ಕಟ್ ನಿರ್ವಹಣೆಗೆ ಮೆಸ್ಕಾಂ ಸಿಬ್ಬಂದಿ ಕೊರತೆತರೀಕೆರೆ, ಪಟ್ಟಣದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಗ್ರಾಹಕರಿಗೆ ಒಂದು ದೊಡ್ಡ ತಲೆನೋವಾಗಿದೆ. ರಾತ್ರಿ ಹಗಲು ಎನ್ನದೆ ಪದೇ ಪದೇ ಕರೆಂಟು ಹೋಗುತ್ತಲೇ ಇರುತ್ತದೆ. ಬಿರು ಬೇಸಿಗೆ ಈ ಸಮಯದಲ್ಲಿ ಜಮೀನು, ತೋಟ, ಹೊಲ ಗದ್ದೆಗಳಲ್ಲಿ ಕೊಳವೆ ಬಾವಿ ಗಳಿಂದ ಪಂಪ್ ಸೆಟ್ ಗಳ ಮೂಲಕ ಬೆಳೆಗಳಿಗೆ ನೀರು ಹಾಯಿಸಲು ನಿರಂತರವಾಗಿ ವಿದ್ಯುತ್ ಬೇಕೇ ಬೇಕು. ಆದರೆ ಆಗಾಗ್ಗೆ ಕೈಕೊಡುವ ಈ ವಿದ್ಯುತ್ತಿನಿಂದ ಬೆಳೆದು ನಿಂತ ಬೆಳೆಗಳಿಗೆ ನೀರು ಪೂರೈಸಲು ಹೆಣಗಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ರೈತರು.