ಬದಲಾವಣೆಗೆ ಶ್ರಾವಣ ಸಹಕಾರಿ: ಶಾಸಕ ತಮ್ಮಯ್ಯಚಿಕ್ಕಮಗಳೂರು, ಸಾಮಾಜಿಕ, ಧಾರ್ಮಿಕ ಬದಲಾವಣೆಗೆ ಶ್ರಾವಣ ಪ್ರೇರಕ ಸಹಕಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ಐಸಿರಿ ಫೌಂಡೇಶನ್ ಸಹಯೋಗ ದೊಂದಿಗೆ ಜುಲೈ26 ರಿಂದ ಆಗಸ್ಟ್ 24 ರವರೆಗೆ ಆಯೋಜಿಸಿರುವ ’ಅಂಗಳದೆಡೆಗೆ ಮಂಗಳ ನುಡಿ-ನಡಿಗೆ’ ’ಶ್ರಾವಣ ಮಾಸದ ಪ್ರವಚನ ಮಾಲಿಕೆ’ಯನ್ನು ಕಲ್ಯಾಣನಗರದ ಶಾಸಕರ ಮನೆಯಂಗಳದಲ್ಲಿ ಉದ್ಘಾಟಿಸಿ ಮಾತನಾಡಿದರು.