ಕೃಷಿ ಚಟುವಟಿಕೆಗೆ ಅಗತ್ಯ1,053 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನುನರಸಿಂಹರಾಜಪುರ, ಮುಂಗಾರು ಮಳೆ ಪ್ರತಿದಿನ ಎಂಬಂತೆ ಆರ್ಭಟಿಸುತ್ತಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಕೃಷಿ ಇಲಾಖೆ ರೈತರಿಗೆ ಅಗತ್ಯವಿದ್ದಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಂಡಿದೆ. ತಾಲೂಕಿನ ರೈತರಿಗೆ ವಾರ್ಷಿಕ 10,100 ಮೆಟ್ರಿಕ್ ಟನ್ ರಸ ಗೊಬ್ಬರದ ಬೇಡಿಕೆ ಇದ್ದು ಪ್ರಸ್ತುತ 11 ಸಹಕಾರ ಸಂಘ ಹಾಗೂ ಇತರ ಖಾಸಗಿ ಗೊಬ್ಬರದ ಅಂಗಡಿ ಸೇರಿ 1, 053 ಮೆಟ್ರಿಕ್ ಟನ್ ರಸ ಗೊಬ್ಬರ ದಾಸ್ತಾನು ಇದೆ.