ಆರ್ಯವೈಶ್ಯರ ಆರ್ಥಿಕ ಸಂಸ್ಥೆಗಳು ವಿಶ್ವಾಸ ಗಳಿಸಿವೆರಾಜ್ಯದಲ್ಲಿ ಆರ್ಯವೈಶ್ಯ ಸಮಾಜದ ಸಹಕಾರ ಸಂಘ, ಸೊಸೈಟಿ, ಬ್ಯಾಂಕ್ಗಳು ಈವರೆಗೂ ತಮ್ಮ ಗ್ರಾಹಕರ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡು, ನಿಯತ್ತಿನಿಂದ, ನಿರ್ವಂಚನೆಯಿಂದ ನಿರಂತರ ಸೇವೆ ಮಾಡಿಕೊಂಡು ಬರುತ್ತಿವೆ. ಇದು ನಾವೆಲ್ಲರೂ ಹೆಮ್ಮೆಪಡುವ ಸಂಗತಿ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಹೇಳಿದ್ದಾರೆ.