ಊಟ ಬಡಿಸಿ, ಸರಳತೆಯಿಂದ ಜನಮನ ಗೆದ್ದ ಸಮರ್ಥ!ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಮ್ಮ 57ನೇ ಜನ್ಮದಿನವನ್ನು ಪತ್ನಿ, ಸಂಸದೆ ಡಾ.ಪ್ರಭಾ, ತಂದೆ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರ ಜೊತೆ ವೇದಿಕೆಯಲ್ಲಿ ಆಚರಿಸಿಕೊಳ್ಳುತ್ತಿದ್ದರೆ, ಇತ್ತ ಊಟದ ಸಭಾಂಗಣದಲ್ಲಿ ಎಸ್ಸೆಸ್ಸೆಂ ಹಿರಿಯ ಪುತ್ರ ಸಮರ್ಥ ಎಂ. ಶಾಮನೂರು ಸಮಾರಂಭಕ್ಕೆ ಆಗಮಿಸಿದ್ದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳಿಗೆ ಸಿಹಿ ತಿನಿಸು ವಿತರಣೆ, ಊಟ ಬಡಿಸುವಲ್ಲಿ ಬ್ಯುಸಿಯಾಗಿ, ಸರಳತೆ, ಆತ್ಮೀಯತೆ ಮೆರೆದರು.