ನವೋದಯ ವಿದ್ಯಾಸಂಘಕ್ಕೆ ಐವತ್ತು ಸಾವಿರ ರುಪಾಯಿ ಕೊಡುಗೆನವೋದಯ ವಿದ್ಯಾಸಂಘದ ನೂತನ ನಿರ್ದೇಶಕರಾದ ವಕೀಲರಾದ ಜಲೇಂದ್ರ ಕುಮಾರ್ ಸಂಘಕ್ಕೆ ವೈಯಕ್ತಿಕವಾಗಿ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ೫೦ ಸಾವಿರ ರು. ಗಳ ಹಣ ನೀಡಿದರು. ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳನ್ನು ಹೆಚ್ಚು ಮಾಡುವ ಸಲುವಾಗಿ ನಿರ್ದೇಶಕರಾಗಿ ಶಾಲೆಗೆ ಬಂದಿದ್ದು, ಈ ಹಣವನ್ನು ಶಾಲೆಯ ಅಭಿವೃದ್ಧಿಗೆ ಖರ್ಚು ಮಾಡಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಿ ಜನರಿಗೆ ಉತ್ತಮ ಸಂದೇಶವನ್ನು ನೀಡಲು ಬಯಸಿದ್ದೇನೆ ಎಂದು ತಿಳಿಸಿದರು.