ಆನೆ ಕಾರಿಡಾರ್ ಕಾರ್ಯರೂಪಕ್ಕೆ ಬಾರದಿದ್ರೆ ಉಪವಾಸ ಸತ್ಯಾಗ್ರಹಆನೆ ಕಾರಿಡರ್ ನಿರ್ಮಿಸುವುದಕ್ಕೆ ಮುಂದಿನ ಬಜೆಟ್ನಲ್ಲಿ 50 ಕೋಟಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದು, ಶೀಘ್ರವಾಗಿ ಕಾರ್ಯರೂಪಕ್ಕೆ ಬಾರದಿದ್ದರೇ ಫೆಬ್ರವರಿ ತಿಂಗಳ ಕೊನೆಯಲ್ಲಿ ವಿಧಾನಸೌಧದ ಮುಂದೆ ಅಹೋರಾತ್ರಿ ಉಪವಾಸ ಸತ್ಯಗ್ರಹ ಮಾಡುವುದಾಗಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಸಂಗಂ ಎಚ್ಚರಿಸಿದರು. ಸರ್ಕಾರ ಮತ್ತು ಸಚಿವರ ಘೋಷಣೆ ಘೋಷಣೆಯಾಗಿ ಉಳಿಯದೆ ಶೀಘ್ರವಾಗಿ ಬಜೆಟ್ ಸಂದರ್ಭದಲ್ಲೆ ಕಾರಿಡಾರ್ ಯೋಜನೆ ಕಾಮಗಾರಿ ಕಾರ್ಯರೂಪಕ್ಕೆ ಬಂದರೆ ಮಲೆನಾಡು ಬಾಗದ ರೈತರು ನಿಟ್ಟುಸಿರು ಬಿಡುವಂತಾಗುತ್ತದೆ.