• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಾವಯವ ಕೃಷಿಯಿಂದ ಮಣ್ಣಿನ ಜೀವಸತ್ವ ಉಳಿಸಲು ಸಾಧ್ಯ
ಬದಲಾದ ಜೀವನಶೈಲಿ ಮಾನವ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿವೆ ಎಂಬವುದಕ್ಕೆ ಸಾಕ್ಷಿ ಇತ್ತೀಚಿನದಲ್ಲಿ ಜನರು ಆಸ್ಪತ್ರೆಗೆ ಅಲೆಯುತ್ತಾ ಹಣ ವ್ಯಯ ಮಾಡುತ್ತಿದ್ದಾರೆ. ರಾಗಿ ಉತ್ತಮ ಆಹಾರ, ಆದರೆ ರಾಗಿ ಬೆಳೆ ದಿನಕಳೆದಂತೆ ಇಳಿಮುಖವಾಗುತ್ತಿದೆ. ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿ ಎಂದು ತಿಳಿದರೂ ಜನರು ಮಾತ್ರ ಬಾಯಿರುಚಿಗೆ ಮಾರು ಹೋಗುತ್ತಿದ್ದಾರೆ. ಕೃಷಿಕರು ಮಣ್ಣಿನ ಜೀವಸತ್ವ ಉಳಿಸಲು ಸಾವಯವ ಕೃಷಿ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಹಾಸನ ಆಕಾಶವಾಣಿ ಮುಖ್ಯಸ್ಥ ಡಾ.ವಿಜಯ ಅಂಗಡಿ ಹೇಳಿದರು.
ಪೌರಕಾರ್ಮಿಕರಿದ್ದರೆ ನಗರ ಸ್ವಚ್ಛತೆ
ನಗರವನ್ನು ಮತ್ತು ಪಟ್ಟಣವನ್ನು ಅತಿ ಸ್ವಚ್ಛತೆಯಿಂದ ಸ್ವಚ್ಛಗೊಳಿಸಲು ಪೌರಕಾರ್ಮಿಕರ ಶ್ರಮ ಬಹುಮಖ್ಯವಾಗಿದೆ. ನಾಗರಿಕತೆ ತಿಳಿದಿರುವವರೇ ತಪ್ಪು ಮಾಡಿ ಬೀದಿ ಮತ್ತು ಎಲ್ಲೆಂದರಲ್ಲಿ ಅಲ್ಲಿ ಕಸ ಬಿಸಾಡುತ್ತಾರೆ. ಅದನ್ನು ಸ್ವಚ್ಛಗೊಳಿಸಿ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ. ಇಂಥವರೊಂದಿಗೆ ನನ್ನ ಹುಟ್ಟುಹಬ್ಬವನ್ನು ಪ್ರತಿವರ್ಷ ನನ್ನ ಸ್ನೇಹಿತರು ಆಚರಿಸುವರು. ನನ್ನ ಸ್ನೇಹಿತರು ಮತ್ತು ನನ್ನ ಸಹೋದ್ಯೋಗಿಗಳು ಹುಟ್ಟುಹಬ್ಬವನ್ನು ಪೌರಕಾರ್ಮಿಕರೊಂದಿಗೆ ಮತ್ತು ಇನ್ನಿತರೆ ಸಮಾಜ ಸೇವೆಗಳೊಂದಿಗೆ ಆಚರಿಸಲು ಮುಂದಾಗಿದ್ದಾರೆ ಎಂದು ಪುರಸಭಾ ಮಾಜಿ ಸದಸ್ಯ ಸಿ. ಎನ್. ಶಶಿಧರ್‌ ತಿಳಿಸಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಕುಟುಂಬಕ್ಕೆ ವಿಷ ಕೊಟ್ಟ ಸೊಸೆ
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಮತ್ತು ಆತನ ಕುಟುಂಬವನ್ನ ಮುಗಿಸಲು ಪತ್ನಿಯೊಬ್ಬಳು ಖತರ್ನಾಕ್​​ ಪ್ಲಾನ್​ ರೂಪಿಸಿದ್ದು, ಇಡೀ ಕುಟುಂಬಕ್ಕೆ ವಿಷದ ಮಾತ್ರೆ ಹಾಕಿ, ಇದೀಗ ಸಿಕ್ಕಿಬಿದ್ದಿದ್ದಾಳೆ. ಘಟನೆ ಸಂಬಂಧ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು. ತನಿಖೆ ವೇಳೆ ಊಟಕ್ಕೆ ವಿಷ ಹಾಕಿರುವುದು ಬೆಳಕಿಗೆ ಬಂದಿದೆ. ಈ ವಿಷಯ ಮನೆಯವರಿಗೆ ತಿಳಿದರೆ ತೊಂದರೆಯಾಗುತ್ತದೆ ಎಂದು ಯೋಚಿಸಿದ್ದ ಚೈತ್ರ ತನ್ನ ಕುಟುಂಬದವರನ್ನು ಕೊನೆಗಾಣಿಸಲು ಪ್ಲಾನ್​ ರೂಪಿಸಿದ್ದಳು. ಪತಿ ಗಜೇಂದ್ರ, ಅತ್ತೆ-ಮಾವ ಅಷ್ಟೇ ಅಲ್ಲದೇ ಇಬ್ಬರು ಹೆತ್ತ ಮಕ್ಕಳಿಗೆ ಆಹಾರದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಿಧಾನವಾಗಿ ವಿಷ ದೇಹ ಪ್ರವೇಶಿಸುವ ಯೋಜನೆ ರೂಪಿಸಿದ್ದಳು.​
ಇಂದು ಕಸಾಪದಲ್ಲಿ ಉಚಿತ ಶ್ರವಣ ತಪಾಸಣೆ
ಟೀಮ್ ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಈಗ ನಾವು ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನಮ್ಮ ಸಂಸ್ಥೆಯಾದ ಟೀಮ್ ಈಶ್ವರ್ ಮಲ್ಲೆಯವರು ಶ್ರವಣದ ಯಂತ್ರಕ್ಕೆ ಆಗುವ ವೆಚ್ಚದ ಶೇಕಡಾ ೪೦% ಮೊತ್ತವನ್ನು ಭರಿಸಲಾಗುತ್ತಿದ್ದು, ರೋಗಿಗಳು ಇವರ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿದರು
ಕಾಲ್ತುಳಿತಕ್ಕೆ ಬಲಿಯಾದ ಭೂಮಿಕ್‌ ಸಮಾಧಿ ಮುಂದೆ ತಂದೆಯ ಕಣ್ಣೀರು
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದದಲ್ಲಿ ಭೂಮಿಕ್​ ತಂದೆ ಲಕ್ಷ್ಮಣ್ ಅವರ ಆಕ್ರಂದನ, ಮೂಖರೋಧನೆ ಹೇಳತೀರದಾಗಿದ್ದು ಕಳೆದ ಎರಡು ದಿನದಿಂದ ಸಮಾಧಿ ಮೇಲೆ ಮಲಗಿ ಮರುಗುತ್ತಿದ್ದಾರೆ. ಮಕ್ಕಳನ್ನ ನೆನೆದು ಹೆತ್ತವರು ಕಣ್ಣೀರಿಡುತ್ತಿದ್ದು, ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಲಕ್ಷ್ಮಣ್ ಅವರು ತನ್ನ ಮಗ ಭೂಮಿಕ್​ ಸಮಾಧಿ ಮುಂದೆ ಗೋಳಾಡುತ್ತಿರುವುದು ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿದೆ.
ನೈಸರ್ಗಿಕ ಕೃಷಿಯಿಂದ ಹೆಚ್ಚು ಆದಾಯ ಸಾಧ್ಯ
ಕುರುಭತ್ತೂರು ಗ್ರಾಪಂನ ಕುವೆಂಪು ಸಭಾಂಗಣದಲ್ಲಿ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ ಕಂದಲಿ ಕೃಷಿ ವಿಜ್ಞಾನಕೇಂದ್ರ ಹಾಗೂ ತೋಟಗಾರಿಕೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಆಧುನಿಕ ಕೃಷಿ ಪದ್ಧತಿಯಿಂದ ಹಾಳಾಗುತ್ತಿರುವ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ಮುಂದಿನ ಜನಾಂಗಕ್ಕೆ ಉತ್ತಮ ಕೃಷಿಭೂಮಿ ಹಸ್ತಾಂತರಿಸುವ ಉದ್ದೇಶದಿಂದ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಸ್ವಾಭಾವಿಕ ಕೃಷಿಗೆ ಒತ್ತುಕೊಡುವ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗುಲಸಿಂದ ಕೆರೆಕೋಡಿ ಕಾಲುವೆ ನಿರ್ಮಾಣಕ್ಕೆ ಅನುದಾನ
ಗುಲಸಿಂದ ಗ್ರಾಮದಲ್ಲಿನ ರಾಘವೇಂದ್ರಸ್ವಾಮಿ ನೂತನ ಪೂಜಾ ಮಂದಿರದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಕೆರೆಕೋಡಿ ನೀರು ಸರಾಗವಾಗಿ ಹರಿಯಲು ಕಾಲುವೆ ನಿರ್ಮಾಣಕ್ಕೆ ೪೯ ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ಬಾಗೂರು ಮುಖ್ಯರಸ್ತೆಗೆ ಅಂದಾಜು ೩ ಲಕ್ಷ ರು. ವೆಚ್ಚ ಮಾಡಿ ಕಮಾನು ನಿರ್ಮಾಣ ಮಾಡಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ನೀಡಿದ್ದಾರೆ. ಗ್ರಾಮದ ದೇವಾಲಯಗಳ ಮುಖ್ಯ ಪ್ರವೇಶದ್ವಾರವಾಗಿದ್ದು ದೇವಾಲಯದ ಪ್ರಾಂಗಣದ ಸೌಂದರ್ಯ ಹೆಚ್ಚಲಿದೆ ಎಂದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ
ಬರಗಾಲದ ಪರಿಸ್ಥಿತಿಯ ಚಿತ್ರಣವನ್ನು ಉದಾಹರಣೆ ನೀಡುವುದರ ಮೂಲಕ ನಾವು ಅಳವಡಿಸಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಯು ಕೂಡ ಸಮತೋಲಿತ ಪರಿಸರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಶಿಕ್ಷಣ ನೀಡುವುದು ಅವಶ್ಯಕ ಎಂಬುದನ್ನು ತಿಳಿಸುತ್ತಾ, ಪ್ಲಾಸ್ಟಿಕ್ ಮುಕ್ತ ಸಮಾಜ, ಸಾವಯವ ಕೃಷಿಯ ಮಹತ್ವ, ಹಸಿರು ಕ್ರಾಂತಿಯ ಪಿತಾಮಹ ಡಾ. ಸ್ವಾಮಿನಾಥನ್ ಕೊಡುಗೆಯನ್ನು ವಿವರಿಸಿದರು.
ನಾಳೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ಗೆ ನಾಗರಿಕರ ಸನ್ಮಾನ
ಹಾಸನಾಂಬ ಕಲಾಕ್ಷೇತ್ರದಲ್ಲಿ ಜೂನ್ ೯ರ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ ಅವರಿಗೆ ಜಿಲ್ಲಾ ನಾಗರಿಕ ಸನ್ಮಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಹಾಸನದ ಹೆಮ್ಮೆಯ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ೨೦೨೫ರ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಕನ್ನಡ, ಕರ್ನಾಟಕ ಮತ್ತು ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿದೆ ಎಂದರು.
ರಾಜೀವ್‌ ಆಯುರ್ವೇದ ಕಾಲೇಜಲ್ಲಿ ಪರಿಸರ ದಿನಾಚರಣೆ
ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಎಂಡೋಸಲ್ಫನ್ ನಂತಹ ವಿಷಕಾರಿ ಅಂಶಗಳನ್ನು ಬಳಸುವುದರಿಂದ ಕ್ಯಾನ್ಸರ್, ಅಂಗವೈಕಲ್ಯದಂತ ಮಾರಕ ಕಾಯಿಲೆಗೆ ತುತ್ತಾಗುವುದರೊಂದಿಗೆ ಪ್ರಕೃತಿಯ ವಿನಾಶಕ್ಕೆ ಕಾರಣವಾಗಬಹುದು. ಕ್ಯುಬಾ ದೇಶದಲ್ಲಿ ಪರಿಸರ ಸ್ನೇಹಿ ವ್ಯವಸಾಯ ಮಾಡುವುದರಿಂದ ಪ್ರಕೃತಿಯ ವಿಕೋಪವಾಗುದನ್ನು ತಡೆಯುತ್ತಾರೆ. ಮನೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಸ್ವಂತ ವಾಹನ ಬಳಸುವುದರಿಂದ ಅತಿಯಾದ ಕಾರ್ಬನ್ ಮೋನೋಕ್ಸೈಡ್ ಹೊರಸೂಸಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವುದಲ್ಲದೆ ಪ್ರಕೃತಿಯ ತಾಪಮಾನವೂ ಹೆಚ್ಚಳವಾಗುವಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದರು.
  • < previous
  • 1
  • ...
  • 67
  • 68
  • 69
  • 70
  • 71
  • 72
  • 73
  • 74
  • 75
  • ...
  • 507
  • next >
Top Stories
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ
‘ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಇಲ್ಲ’
ಶಾಸಕ ಪಪ್ಪಿ ಬಳಿ ಇದ್ದ 21 ಕೇಜಿ ಚಿನ್ನ ಇ.ಡಿ. ಜಪ್ತಿ!
ಎಂಎಲ್ಸಿಗಳ ಜತೆ ಸಿಎಂ ಸಭೆ, ಅನುದಾನ ಭರವಸೆ
‘ಕೈ’ ಸರ್ಕಾರ ಇದೆ ಎಂದು ದುಸ್ಸಾಹಸ : ಜೋಶಿ ಟೀಕೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved