• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅರಸೀಕೆರೆ ತಾಲೂಕಲ್ಲಿ ಹೆಚ್ಚು ಶುದ್ಧ ಕುಡಿಯುವ ನೀರು ಘಟಕ
ಮನುಷ್ಯನಿಗೆ ಬಹಳ ಮುಖ್ಯವಾದದ್ದು ಆರೋಗ್ಯ. ಅದಕ್ಕೆ ಶುದ್ಧ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಸುರೇಶ್ ಮೊಲಿ ಹೇಳಿದರು. ಧರ್ಮಸ್ಥಳ ಕ್ಷೇತ್ರ ನಿರ್ವಹಣೆ ಮಾಡುತ್ತಿರುವ ಈ ಘಟಕಗಳು ನೈರ್ಮಲ್ಯದಿಂದ ಇರುವಂತೆ ಗಮನ ಕೊಡಿ ಪ್ರಾಮಾಣಿಕ ಸೇವೆಯಿಂದ ನೀವು ಬೆಳೆಯಲು ಸಾಧ್ಯವಾಗುತ್ತದೆ ನಾನು ಸಹ ಒಬ್ಬ ಪ್ರೇರಕನಾಗಿದ್ದೆ 30 ವರ್ಷಗಳ ಹಿಂದೆ, ಇಂದು ನಿರ್ದೇಶಕನಾಗಿದ್ದೇನೆ ನಮ್ಮ ಕರ್ತವ್ಯ ನಿಷ್ಠೆ ನಮ್ಮನ್ನು ಬೆಳೆಸುತ್ತದೆ ಎಂದು ಕಿವಿಮಾತು ಹೇಳಿದರು.
ಮಳೆ ನಿಂತ ಹಿನ್ನೆಲೆ ಬೆಳೆಗಳ ಆರೈಕೆಯಲ್ಲಿ ರೈತರು
ಮುಂಗಾರು ಪೂರ್ವ ಮಳೆಗೆ ತತ್ತರಿಸಿದ್ದ ಇಳೆಗೆ ಇದೀಗ ಒಣ ಹವೆ ಸೃಷ್ಟಿಯಾಗಿದ್ದು ರೈತರು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಮಗ್ನರಾಗಿದ್ದಾರೆ. ಕೆಲ ದಿನಗಳಿಂದ ಮಳೆ ಇಲ್ಲದ ಕಾರಣ ರೈತರು ಜಮೀನುಗಳತ್ತ ಮುಖ ಮಾಡಿದ್ದು ಹೊಗೆಸೊಪ್ಪು ಗಿಡಗಳಿಗೆ ರಸಗೊಬ್ಬರ ನೀಡಿ ಕಳೆ ತೆಗೆಯುತ್ತಿದ್ದಾರೆ. ಕೆಲವು ಕಡೆ ಮಳೆಯಿಂದಾಗಿ ಗಿಡಗಳಿಗೆ ಸೊರಗು ರೋಗ ಕಾಣಿಸಿಕೊಂಡಿದೆ. ಔಷಧಿ ಸಿಂಪಡಣೆ ಮಾಡಿ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ನಿರತರಾಗಿದ್ದಾರೆ. ಆಲೂಗಡ್ಡೆಯನ್ನು ಮಳೆ ಕಾರಣ ಸದ್ಯಕ್ಕೆ 350 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ಭಾರಿ ಮಳೆ ಪರಿಣಾಮ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆಯಾಗಿದೆ.
ಮನುಷ್ಯ ತನ್ನ ಕಷ್ಟಗಳಿಗೆ ಪರಿಹಾರ ಹುಡುಕಲು ಮುಂದಾಗಲಿ
ಮನುಷ್ಯನನ್ನು ಅಂಧ ಶ್ರದ್ಧೆಯಿಂದ, ಶ್ರದ್ಧೆಯೆಡೆಗೆ ಕರೆದೊಯ್ಯುವ ಮಾರ್ಗದರ್ಶನ ಕಾರ್ಯಕ್ರಮವು ಪಟ್ಟಣದ ಸಾವಿತ್ರಮ್ಮ ಕರಿಯಪ್ಪಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಮಹಾರಾಷ್ಟ್ರದ ಅನಂತ ಶ್ರೀ ವಿಭೂಷಿತ್ ಜಗದ್ಗುರು ರಾಮಾನಂದಾಚಾರ್ಯ ಶ್ರೀಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜ ಸ್ವಾಮೀಜಿಗಳು ನೆರೆದಿದ್ದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿದರು. , ಬದುಕಿನಲ್ಲಿ ಎಲ್ಲರಿಗೂ ಸಂಕಷ್ಟಗಳಿವೆ. ಅವುಗಳ ಪರಿಹಾರಕ್ಕೆ ಮುಂದಾಗುವ ದಾರಿಯನ್ನು ಅವರೇ ಕಂಡುಕೊಳ್ಳಬೇಕು. ಆಧ್ಯಾತ್ಮವನ್ನು ಅರಿತು ಗುರುವರ್ಯರಲ್ಲಿ ನಂಬಿಕೆಯಿಟ್ಟಾಗ ಸಮಸ್ಯೆಗಳು ದೂರವಾಗುತ್ತವೆ ಎಂದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ
ಕಂದಾಯ ಇಲಾಖೆ ಡಿಜಿಟಲೀಕರಣಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ವಿನಾಕಾರಣ ಕಂದಾಯ ಇಲಾಖೆ ಅಲೆಯುವುದು ತಪ್ಪಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಈಗಾಗಲೇ ದಾಖಲೆಗಳ ಡಿಜಿಟಲೀಕರಣ ವೇಗವಾಗಿ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ಯಾವುದೇ ದಾಖಲೆಗಳನ್ನು ತಕ್ಷಣವೇ ಪಡೆಯಬಹುದಾಗಿದೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಉಪಯೋಗಿಸುವುದರಿಂದ ದಾಖಲೆಗಳಿಗಾಗಿ ಅಲೆಯುವುದು ತಪ್ಪಲಿದೆ. ಅಲ್ಲದೆ ದಾಖಲೆಗಳ ನಾಶ, ತಿದ್ದುವಂತಹ ಯಾವುದೇ ಪ್ರಕ್ರಿಯೆಗೂ ಡಿಜಿಟಲೀಕರಣ ಅವಕಾಶ ನೀಡುವುದಿಲ್ಲ ಎಂದರು.
ಮಹಿಳಾ ಸಬಲೀಕರಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ
ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಾ ಬಂದಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದ ಸಾಧ್ಯವೆಂದು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು. ಮಹಿಳಾ ಸಂಘದ ಸದಸ್ಯರು ಕೇವಲ ಹಣಕಾಸು ವಹಿವಾಟು ಹೊರತುಪಡಿಸಿ ಅವರಿಗೆ ಕೌಟುಂಬಿಕ ಬದುಕಿನಲ್ಲಿ ಸುಗಮವಾಗಿ ನಡೆಸಲು ಮತ್ತು ಸಮಾಜದ ವಿವಿಧಸ್ತರದಲ್ಲಿ ಸಾಧನೆಗೆ ಮುಂದಾಗಬೇಕಿದೆ ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ನಡೆಸಲಾಗುತ್ತದೆ.
ಯೋಗ ದಿನದಂದು ಎಲ್ಲಾ ಇಲಾಖೆ ಅಧಿಕಾರಿಗಳ ಹಾಜರಾತಿ ಕಡ್ಡಾಯ
ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಜೂ. 21ರಂದು ನಡೆಯಲಿರುವ ವಿಶ್ವ ಯೋಗಾದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚನ್ನಕೇಶವ ದೇವಾಲಯದ ಆವರಣದಲ್ಲಿ ಯೊಗದಿನಾಚರಣೆ ಆಚರಿಸಲಾಗುತ್ತದೆ. ಈಗಾಗಲೇ ರಾಘವೇಂದ್ರ ಹಾಗೂ ಪತಂಜಲಿ ಯೋಗಾಕೇಂದ್ರದ ಯೋಗಪಟುಗಳಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದ್ದು, ಪಟ್ಟಣದ ವಿವಿಧ ಶಾಲೆಗಳಿಂದ ಸುಮಾರು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ‌. ಕೇವಲ ವಿದ್ಯಾರ್ಥಿಗಳು ಅಧಿಕಾರಿಗಳು ಮಾತ್ರ ಈ ಶಿಬಿರದಲ್ಲಿ ಭಾಗವಹಿಸಿದರೆ ಸಾಲದು, ಕಡ್ಡಾಯವಾಗಿ ಸಾರ್ವಜನಿಕರ ಪಾತ್ರ ಅತಿಮುಖ್ಯವಾಗಿದ್ದು, ತಾವುಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರೆ ಜಿಲ್ಲೆಯಲ್ಲೆ ಮಾದರಿ ಯೋಗ ಶಿಬಿರ ನಡೆಯಲಿದೆ ಎಂದರು.
ಗ್ಯಾರಂಟಿಗಳು ಚುನಾವಣೆ ಗೆಲುವಿಗೆ ಸಹಕಾರಿ ಎಂದ ಪ್ರಕಾಶ್
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ತಾಲೂಕು ಅತೀ ಹೆಚ್ಚು ಅಂದರೆ ೮೧,೧೧೧ ಜನ ನೋಂದಣಿಯಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಸರ್ಕಾರದಿಂದ ಫಲಾನುಭವಿಗಳಿಗೆ ೧೫,೮೨,೪೨,೦೦೦ ರು. ಹಣ ಸಂದಾಯವಾಗಿದೆ. ಅನ್ನಭಾಗ್ಯ ಯೋಜನೆ ಅಡಿ ಒಟ್ಟು ೮೨,೪೩೩ ಜನ ಫಲಾನುಭವಿಗಳು ಸದರಿಯೋಜನೆಯನ್ನು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ಶಕ್ತಿ ಯೋಜನೆ ಅಡಿ ಒಂದು ತಿಂಗಳಿಗೆ ೮,೨೫,೬೫೮ ಜನ ಪ್ರಯಾಣ ಮಾಡಿದ್ದು ಇದರಿಂದ ಸರ್ಕಾರ ೩,೭೧,೦೬,೪೭೨ ವ್ಯಯ ಮಾಡುತ್ತಿದೆ ಎಂದು ಪ್ರಕಾಶ್‌ ಗೌಡ ತಿಳಿಸಿದರು.
ಸಭೆಗೆ ಹೋಗದೆ ರಾಜ್ಯದಲ್ಲೇ ಕುಳಿತರೆ ಅನುದಾನ ಸಿಗುತ್ತದೆಯೇ
ಕರ್ನಾಟಕಕ್ಕೆ ಹಲವು ಅಭಿವೃದ್ಧಿ ಯೋಜನೆಯನ್ನು ಕೊಡಲಾಗಿದ್ದು, ನರೇಂದ್ರ ಮೋದಿ ಸಾಧನೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿರುವುದೇ ಜನರು ಅಂಕವನ್ನು ಕೊಟ್ಟಿದ್ದಾರೆ. ಇದು ಸಾಮಾನ್ಯವಾದ ವಿಚಾರವಲ್ಲ. ಹಿಂದಿನ ಅಂಕಿಅಂಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾದ ಅಂಕಿ ಅಂಶ ನೀಡಿದರೇ ತಿಳಿಯುತ್ತದೆ. ೨೦೦೯ರಿಂದ ೨೦೧೪ರವರೆಗೂ ಟ್ಯಾಕ್ಸ್ ಪಾಲು ರಾಜ್ಯಕ್ಕೆ ೯ ಸಾವಿರ ಕೋಟಿ ಇತ್ತು. ಈಗ ೨೦೨೪ ಮಾರ್ಚ್‌ಗೆ ೧ ಲಕ್ಷ ಕೋಟಿ ನೀಡಲಾಗಿದೆ. ಜಲ್ ಜೀವನ್ ಯೋಜನೆಗೆ ಕೇಂದ್ರ ೨೬ ಸಾವಿರ ಕೋಟಿ ನೀಡಿದೆ, ಭದ್ರ ಮೇಲ್ದಂಡೆಗೆ ಯೋಜನೆಗೆ ೫೩೦೦ ಕೋಟಿ ಘೋಷಣೆ ಮಾಡಿದ್ರೂ ಕೊಡ್ಲಿಲ ಅಂತಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್‌ ನಾರಾಯಣ್ ಟಾಂಗ್ ನೀಡಿದರು.
ಅಂತರ್ಘಟ್ಟೆಮ್ಮ ಮಂಡಲ ಪೂಜೆ
ಅಂತರಘಟ್ಟೆಮ್ಮ ದೇವಾಲಯವು ಪುನರ್ ನಿರ್ಮಾಣಗೊಂಡು ಪ್ರಾಣಪ್ರತಿಷ್ಟಾಪನಾ ಮಂಗಳ ಕಾರ್ಯಕ್ರಮ ಕಳೆದ ೪೮ ದಿನಗಳ ಹಿಂದೆ ನಡೆಸಲಾಗಿತ್ತು. ಅಂತರಘಟ್ಟಮ್ಮ ದೇವಾಲಯದಲ್ಲಿ ೪೮ನೇ ದಿನದ ಮಂಡಲ ಪೂಜೆಯು ಆರಂಭಗೊಂಡಿತು. ಸುಮಂಗಲಿಯರ ಕಳಶದೊಂದಿಗೆ ದೇವಸ್ಥಾನ ಪ್ರವೇಶಿಸಿ ದೇವಸ್ಥಾನದಲ್ಲಿ ವಿವಿಧ ಪೂಜಾದಿ ಕೈಂಕರ್ಯಗಳು ಜರುಗಿದವು. ಮಹಾಮಂಗಳರಾತಿ, ಹವನ ಪೂಜಾದಿಗಳು ಜರುಗಿದವು. ಗ್ರಾಪಂ ಸದಸ್ಯರಾದ ರಾಣಿ ಶಂಕರ್ ಶೆಟ್ಟಿ, ಸುಕನ್ಯ, ಕಿರಣ್, ತುಕರಾಮ್, ಪ್ರಕಾಶ್ ಅಲ್ಲದೆ ಇನ್ನು ಅನೇಕ ಭಕ್ತಾದಿಗಳು ಪೂಜಾದಿ ಕೈಂಕರ್ಯದಲ್ಲಿ ಭಾಗವಹಿಸಿದರು.
ತಾಳೂರು ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ
ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿ ಎಷ್ಟೋ ಜೀವಸಂಕುಲ ಅಳಿವಿನಂಚಿಗೆ ಬಂದು ನಿಂತಿವೆ ಎಂದು ಸಾಲುಮರದ ಪೊಲೀಸ್ ಹಾಗೂ ಕವಿ ವೈ. ಬಿ. ಕಾಂತರಾಜ್ ಅಭಿಪ್ರಾಯಪಟ್ಟರು. ಅಂಬೇಡ್ಕರ್‌ ವಿಚಾರಧಾರೆಗಳು ಸಮಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಬದುಕು ಹಸನಾಗಬೇಕಾದರೆ ಗುಣಾತ್ಮಕ ಶಿಕ್ಷಣದ ಅಗತ್ಯವಿದೆ. ಇಂತಹ ಗುಣಾತ್ಮಕ ಶಿಕ್ಷಣ ದೊರೆಯುವುದೇ ಸರ್ಕಾರಿ ಶಾಲೆಗಳಲ್ಲಿ ಎಂದರು.
  • < previous
  • 1
  • ...
  • 64
  • 65
  • 66
  • 67
  • 68
  • 69
  • 70
  • 71
  • 72
  • ...
  • 507
  • next >
Top Stories
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ
‘ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಇಲ್ಲ’
ಶಾಸಕ ಪಪ್ಪಿ ಬಳಿ ಇದ್ದ 21 ಕೇಜಿ ಚಿನ್ನ ಇ.ಡಿ. ಜಪ್ತಿ!
ಎಂಎಲ್ಸಿಗಳ ಜತೆ ಸಿಎಂ ಸಭೆ, ಅನುದಾನ ಭರವಸೆ
‘ಕೈ’ ಸರ್ಕಾರ ಇದೆ ಎಂದು ದುಸ್ಸಾಹಸ : ಜೋಶಿ ಟೀಕೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved