ಮುಖ್ಯಾಧಿಕಾರಿ ವಿರುದ್ಧ ಕೆರಳಿದ ಅಧ್ಯಕ್ಷೆ, ಸದಸ್ಯರುಕನ್ನಡಪ್ರಭ ವಾರ್ತೆ ನಾಲತವಾಡ ಜನರು ಮೂಲಸೌಲಭ್ಯಗಳ ಕೊರತೆಯಿಂದ ಕಂಗಾಲಾಗಿ ಹೋಗಿದ್ದಾರೆ. ಕುಡಿಯುವ ನೀರಿನ ಅಭಾವ, ಸ್ವಚ್ಛತೆ, ಉತಾರ ಪೂರೈಕೆಯಲ್ಲಿ ವಿಳಂಬ, ಆಶ್ರಯ ಮನೆಗಳ ಜಿಪಿಎಸ್, ರಸ್ತೆ ಸಂಪತ್ತಿನ ದುಸ್ಥಿತಿ, ಮತ್ತು ಕಸದ ನಿರ್ವಹಣೆಯಲ್ಲಿ ಉಂಟಾಗಿರುವ ಲೋಪಗಳು ಬಗ್ಗೆ ಜನರು ನಮ್ಮನ್ನು ಪ್ರಶ್ನೆ ಮಾಡುತಿದ್ದಾರೆ. ನಾವು ಏನು ಉತ್ತರ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವಿರುದ್ದ ಅಧ್ಯಕ್ಷೆ ಹಾಗೂ ಸದಸ್ಯರೇ ಕೆರಳಿ ಕೆಂಡವಾದ ಘಟನೆ ನಡೆಯಿತು.