ತಾತ್ಕಾಲಿಕ ಶೆಡ್ ತೆರಳಲು ನಿರಾಶ್ರಿತರ ನಕಾರಕನ್ನಡಪ್ರಭ ವಾರ್ತೆ ಮುಧೋಳ ಘಟಪ್ರಭಾ ನದಿ ಪ್ರವಾಹದಿಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ತಗ್ಗಿದೆ ನಿಜ. ಆದ್ರೆ, ಈ ಮೊದಲು ವಾಸಿಸುತ್ತಿದ್ದ ತಾತ್ಕಾಲಿಕ ಶೆಡ್ಗಳಿಗೆ ವಾಪಸ್ ಹೋಗಲು ಸಾಕಷ್ಟು ತೊಂದರೆಯಾಗಿದೆ ಎಂದು ನಿರಾಶ್ರಿತರು ಸಂಕಟ ಅನುಭವಿಸುತ್ತಿದ್ದಾರೆ. ಶೆಡ್ಗಳಲ್ಲಿ ನೀರು ನಿಂತು, ನೆಲವೆಲ್ಲ ಸಂಪೂರ್ಣ ಒದ್ದೆಯಾಗಿದೆ. ಶೆಡ್ನಲ್ಲಿ ಇರುವುದು ಅಸಾಧ್ಯ, ಶೆಡ್ಗಳಲ್ಲಿ ವಿಷ ಜಂತುಗಳು ವಾಸವಾಗುತ್ತಿವೆ. ಅವುಗಳಿಂದ ಅಪಾಯವೇ ಹೆಚ್ಚು.