ತಂದೆ ಮಾರ್ಗದಲ್ಲಿ ಬಿಜೆಪಿ ಸಂಘಟನೆ ಮಾಡುವೆ: ಅರುಣ ಕಾರಜೋಳನಮ್ಮ ತಂದೆ ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರ ಆರ್ಶೀವಾದ ಹಾಗೂ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದುಕೊಂಡು ಬಿಜೆಪಿ ಸಂಘಟನೆ ಮಾಡುತ್ತಿದ್ದೇನೆ, ನಾನೂ ಕೂಡ ಅವರಂತೆ ಸಮಾಜ ಮತ್ತು ಜನಸೇವೆ ಮಾಡಬೇಕೆಂದು ಕನಸು ಕಂಡಿದ್ದೇನೆ. ಜನರ ಸಹಾಯ ಮತ್ತು ಸಹಕಾರ ನನ್ನ ಮೇಲೆ ಯಾವತ್ತಿಗೂ ಇದೆ. ಅದನ್ನು ಉಳಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಹೇಳಿದರು.