ಪ್ರಾಚ್ಯವಸ್ತು ಇಲಾಖೆ ಕಿರಿಕಿರಿ ತಪ್ಪಿಸಲು ಗ್ರಾಮಸ್ಥರ ಮನವಿಅಮೀನಗಡ: ಮಳೆಯಿಂದ ಮನೆ ಛಾವಣಿಗಳು ಕುಸಿದಿದ್ದು, ನಿರಂತರ ಮಳೆಯಿಂದ ಮನೆಗಳು ಸೋರುತ್ತಿವೆ. ದುರಸ್ತಿ ಮಾಡಲು ಸ್ಥಳೀಯ ಪ್ರಾಚ್ಯವಸ್ತು ಇಲಾಖೆಯವರು ಬಿಡುತ್ತಿಲ್ಲ. ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇದರಿಂದ ನಮಗೆ ವಾಸಿಸಲು ತೀವ್ರ ತೊಂದರೆಯಾಗಿದೆ. ಪ್ರಾಚ್ಯವಸ್ತು ಇಲಾಖೆಯವರು ತಕ್ಷಣವೇ ದೂರು ಹಿಂಪಡೆದು, ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಪೊಲೀಸ್ ಇಲಾಖೆ ಮಧ್ಯೆ ಪ್ರವೇಶಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಅಮೀನಗಡ ಪೊಲೀಸ್ ಠಾಣಾಧಿಕಾರಿಗಳಿಗೆ ಐಹೊಳೆಯ ನಾಗರಿಕರು ಮನವಿ ಸಲ್ಲಿಸಿದರು.