ಗ್ರಾಹಕರಾಗಿ ಪ್ರತಿ ಖರೀದಿ ವಸ್ತುವಿಗೂ ರಶೀದಿ ಕೇಳಿ ಪಡೆದುಕೊಳ್ಳಿ: ಚಂದ್ರಶೇಖರ ಪಿ. ದಿಡ್ಡಿನಾವೆಲ್ಲರೂ ದಿನನಿತ್ಯ ಒಂದಿಲ್ಲ ಒಂದು ರೀತಿ ಗ್ರಾಹಕರಾಗಿದ್ದು, ನಮಗೆ ಮೋಸವಾದಾಗ ಗ್ರಾಹಕರ ವೇದಿಕೆಗೆ ಹೋಗ್ತೀವಿ, ಆದರೆ ಅದಕ್ಕೂ ಮೊದಲು ಕೆಲ ವಿಷಯಗಳ ಕುರಿತು ಎಚ್ಚರ ವಹಿಸಬೇಕು. ನಮ್ಮ ಪ್ರತಿ ವ್ಯವಹಾರಗಳಿಗೂ ರಶೀದಿ ಸಹಿತ ಸೂಕ್ತ ದಾಖಲೆ ಕೇಳಿ ಪಡೆದು ಅದನ್ನು ಕಾಯ್ದುಕೊಂಡಾಗ ಮಾತ್ರ ಗ್ರಾಹಕರ ವೇದಿಕೆ ನಮಗೆ ನಿಮಗೆ ಸಹಕರಿಸಲು ಸಾಧ್ಯ ಎಂದು ಹಿರಿಯ ದಿನಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ಪಿ ದಿಡ್ಡಿ ತಿಳಿಸಿದರು.