ಕೋರೆ ಕಾರ್ಖಾನೆಗೆ ಸುಸ್ಥಿರ ಕಾರ್ಯನಿರ್ವಹಣೆ ವಿಶೇಷ ವರ್ಗ ಪ್ರಶಸ್ತಿಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಹವಿದ್ಯುತ್ ಘಟಕಕ್ಕೆ ಸಹಕಾರ ವಿಭಾಗದ 80ರ ಒಳಗಿನ ಬಾರ್ ಪ್ರೆಶರ್ ವಿಭಾಗದಲ್ಲಿನ ಸುಸ್ಥಿರ ಕಾರ್ಯನಿರ್ವಹಣೆಯ ವಿಶೇಷ ವರ್ಗ ಪ್ರಶಸ್ತಿಯನ್ನು ಪುಣೆಯಲ್ಲಿ ಜರುಗಿದ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರ ಮಾಜಿ ಕೃಷಿ ಸಚಿವ ಶರದ ಪವಾರ, ಮಹಾರಾಷ್ಟ್ರ ಸಹಕಾರ ಸಚಿವ ಬಾಬಾಸಾಹೇಬ ಪಾಟೀಲ, ರಾ.ಸ.ಸ.ಕಾ.ನಿ, ಹೊಸದೆಹಲಿಯ ಅಧ್ಯಕ್ಷರು ಹರ್ಷವರ್ಧನ ಪಾಟೀಲ ಹಾಗೂ ಪುಣೆ ಕೋಜನರೇಶನ್ ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷ ಜಯಪ್ರಕಾಶ ಸಾಳುಂಕೆ ದಾಂಡೆಗಾಂವಕರ ಇವರುಗಳು ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಪುಣೆ ಕೋ ಜನರೇಶನ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದರು.