ದೃಢ ಮನಸ್ಸಿನಿಂದ ಗುರಿ ಸಾಧಿಸುವ ಛಲ ಇರಬೇಕುಮುಂದೆ ಗುರಿ ಹಿಂದೆ ಗುರು ಮತ್ತು ದೃಢಸಂಕಲ್ಪ ಇದ್ದರೆ ಏನನ್ನಾದರೂ ಸಾಧಿಸಬಹುದು. ತಿದ್ದಿ, ಬುದ್ಧಿ ಹೇಳಿ ಭವಿಷ್ಯದ ಸರಿ ಮಾರ್ಗ ತೋರುವ ಗುರು ಮತ್ತು ಛಲದಿಂದ ಗುರಿಯನ್ನು ಸಾಧಿಸುವ ಮನೋಭಾವವನ್ನು ವಿದ್ಯಾರ್ಥಿನಿಯರು ರೂಢಿಸಿಕೊಳ್ಳಬೇಕು ಆಗ ಮಾತ್ರ ಯಶಸ್ಸು ಲಭಿಸುತ್ತದೆ ಎಂದರು. ತಾವು ನಡೆದು ಬಂದ ಹಾದಿ, ಕಠಿಣ ಶ್ರಮ, ಮಾರ್ಗದರ್ಶಕರಾಗಿ ನಿಂತ ಗುರುಗಳು ಮತ್ತು ಶ್ರಮದ ಫಲ ಅದರ ಮಹತ್ವದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದ ಅವರು, ಭವಿಷ್ಯದಲ್ಲಿ ಇರುವ ಉದ್ಯೋಗಾವಕಾಶದ ಬಗ್ಗೆ ಮತ್ತು ಪೂರ್ವ ತಯಾರಿ ಬಗ್ಗೆ ತಿಳಿಸಿದರು.