• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಕ್ಕಳಿಗೆ ಮಹಾತ್ಮರ ಆದರ್ಶ ತಿಳಿಸಿಕೊಡಿ: ಶಾಸಕ ಸಿಮೆಂಟ್ ಮಂಜು
ಮಹಾತ್ಮರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಲು ಪೋಷಕರು ಮುಂದಾದಲ್ಲಿ ಮಾತ್ರ ಉತ್ತಮ ವ್ಯಕ್ತಿಗಳ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಸಕಲೇಶಪುರದಲ್ಲಿ ಕನದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಸ್ಟೆಲ್‌ ಅವ್ಯವಸ್ಥೆಗೆ ಆಯುಕ್ತರ ಆಕ್ರೋಶ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ರಾತ್ರೋರಾತ್ರಿ ಇಲಾಖೆಯ ಮುಖ್ಯ ಆಯುಕ್ತರು ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹಾಸ್ಟೆಲ್‌ನ ಅವ್ಯವಸ್ಥೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ಇಲ್ಲಿ ನಡೆಯುವ ಗೋಲ್‌ಮಾಲ್ ಗೊತ್ತಾಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.
ಬೇಲೂರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮಂಜುನಾಥ್
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಆರ್‌.ಮಂಜುನಾಥ್, ರಾಜ್ಯ ಪರಿಷತ್ತು ಸದಸ್ಯ ಪಶುಪಾಲನಾ ಇಲಾಖೆಯ ಜಿ.ಆರ್.ರವಿ ಚುನಾಯಿತರಾದರು. ಖಜಾಂಚಿ ಸ್ಥಾನಕ್ಕೂ ಚುನಾವಣೆ ನಡೆಯಬೇಕಿತ್ತಾದರೂ, ಶಿಕ್ಷಕ ಎಚ್.ಆರ್‌.ಪೂರ್ಣೇಶ್ ಅವರು ಅವಿರೋಧ ಆಯ್ಕೆಯಾಗಿದ್ದರು. ಉಳಿದ ಸ್ಥಾನಗಳ ಪದಾಧಿಕಾರಿಗಳ ಆಯ್ಕೆ ಮಾಡಿಕೊಳ್ಳಲು ಅಧ್ಯಕ್ಷರಿಗೆ ಅವಕಾಶ ನೀಡಲಾಗಿದೆ.
ಶಿಕ್ಷಕರ ತರಬೇತಿ ಕಾರ‍್ಯಕ್ರಮ ಆಯೋಜನೆ
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬೇಲೂರು ತಾಲೂಕು ಪ್ರಥಮ ಸ್ಥಾನ ಪಡೆಯಲು ಎಲ್ಲಾ ಶಾಲೆಗಳ ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಶಿಕ್ಷಕರ ಜವಾಬ್ದಾರಿ ಮಹತ್ತರವಾಗಿದ್ದು ಸಮಾಜವನ್ನು ತಿದ್ದಿ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವ ಮನೋಭಾವವನ್ನು ಶಿಕ್ಷಕರು ಹೊಂದಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ತಿಳಿಸಿದರು. ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪೌಢಶಾಲಾ ಕೋರ್‌ ವಿಷಯ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಫಿ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ
ಕಾಫಿ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಬೆಳೆಗಾರ ನಾಗೇಶ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಇಂದು ಬೆಳಗ್ಗೆ ಕಾಫಿ ತೋಟಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತೋಟದ ಮಾಲೀಕ ನಾಗೇಶ್ ಮೇಲೆ 6 ಕಾಡಾನೆಗಳ ಗುಂಪೊಂದು ಹಠಾತ್ ದಾಳಿ ನಡೆಸಿ, ವಾಹನದ ಸಮೇತ ಅವರನ್ನು ಎಸೆದು ಬೈಕಿನ ಮೇಲೆ ದಾಳಿ ನಡೆಸಿ ಜಖಂ ಮಾಡಿದೆ. ಕೂಡಲೇ ನಾಗೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿವಿಧ ತಳಿಯ ಶ್ವಾನ ಪ್ರದರ್ಶನಕ್ಕೆ ಶಾಸಕ ಸ್ವರೂಪ್ ಚಾಲನೆ
ಶ್ವಾನ ಪ್ರದರ್ಶನದಲ್ಲಿ, ಸುಮಾರು ೨೫ ತಳಿಯ ೨೦೦ಕ್ಕೂ ಹೆಚ್ಚು ಶ್ವಾನಗಳು ಈ ಪ್ರದರ್ಶನದಲ್ಲಿ ತಮ್ಮ ತಮ್ಮ ಮಾಲೀಕರೊಂದಿಗೆ ಭಾಗಿಯಾಗಿ ಗಮನ ಸೆಳೆದವು. ವಿವಿಧ ತಳಿಯ ಶ್ವಾನಗಳನ್ನು ಒಂದೇ ಕಡೆ ಕಂಡ ಡಾಗ್ಸ್ ಪ್ರಿಯರು, ಸಖತ್ ಖುಷಿ ಪಟ್ಟರು. ವಿವಿಧ ಆಕಾದಲ್ಲಿದ್ದ ನಾಯಿಗಳು ನೋಡುಗರನ್ನು ಆಕರ್ಷಿಸಿದವು. ಇಂದು ಭಾನುವಾರವಾದ್ದರಿಂದ ನಿರೀಕ್ಷೆಗೂ ಮೀರಿ ಶ್ವಾನ ಪ್ರಿಯರು ಜಮಾಯಿಸಿ, ವಿವಿಧ ಬಗೆಯ ನಾಯಿ ಮತ್ತು ಅವುಗಳ ತುಂಟಾಟ ಕಂಡು ಸಖತ್ ಮನರಂಜನೆ ಪಡೆದರು.
ರೈಲ್ವೆ ನೌಕರರ ಕನ್ನಡ ಬಳಗದಿಂದ ಕನ್ನಡ ರಾಜ್ಯೋತ್ಸವ
ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನೂರಾರು ರೈಲ್ವೆ ನೌಕರರು ಹಾಗೂ ಕನ್ನಡ ಅಭಿಮಾನಿಗಳು ರಕ್ತದಾನ ಮಾಡಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಿದರು. ನಂತರ ಧ್ವಜಾರೋಹಣವನ್ನು ರೈಲ್ವೆ ವಿಭಾಗೀಯ ವೈದ್ಯಾಧಿಕಾರಿಗಳಾದ ಡಾ. ಅತೀರಾರವರು ನೆರವೇರಿಸಿದರು. ರಕ್ತದಾನ ಮಾಡಿದ ದಾನಿಗಳನ್ನು ರೈಲ್ವೆ ನೌಕರರ ಕನ್ನಡ ಬಳಗದ ಅಧ್ಯಕ್ಷ ಹಾಗೂ ರೈಲು ಚಾಲಕ ಮಂಜು ಸಿ.ರವರು ಸನ್ಮಾನಿಸಿದರು.
ಕಾಡಾನೆ ದಾಳಿ ಕುಟುಂಬಗಳಿಗೆ ಸೂಕ್ತ ಪರಿಹಾರಕ್ಕೆ ಸೂಚನೆ
ಹಿರೆಕೋಲೆ ತಗರೆ ಇನ್ನಿತರ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದ ಬೆಳೆ ನಷ್ಟವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಒಂದಲ್ಲಾ ಒಂದು ಭಾಗಗಳಲ್ಲಿ ಆನೆ ಹಾವಳಿಯಿಂದಾಗಿ ಹೆಚ್ಚಿನ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬಿಕ್ಕೋಡು ಭಾಗಗಳಲ್ಲಿ ಕಟಾವಿಗೆ ಬಂದಂತ ಭತ್ತ, ಜೋಳ ಹಾಗೂ ತೆಂಗನ್ನು ಸಂಪೂರ್ಣ ಹಾನಿಮಾಡಿದ್ದು, ರೈತರಿಗೆ ಸರ್ಕಾರ ನೀಡುವ ಕನಿಷ್ಟ ಪರಿಹಾರ ಬೇಡ, ಆ ಬೆಳೆಗೆ ತಕ್ಕನಾದ ಪರಿಹಾರ ನೀಡುವಂತೆ ಸದನದಲ್ಲಿ ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಸುಗಮ ಸಂಚಾರಕ್ಕೆ ರಸ್ತೆ ಅಭಿವೃದ್ಧಿ ಮುಖ್ಯ
ರಸ್ತೆ ಅಭಿವೃದ್ಧಿ ಹೆಚ್ಚಾದಷ್ಟು ಸಂಚಾರ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ. ಹಾಳಾದ ಹಾಗೂ ಗುಂಡಿ ಬಿದ್ದ ರಸ್ತೆಗಳಿಂದ ಅಪಘಾತಗಳು ಹೆಚ್ಚಾಗಲಿದ್ದು, ರಸ್ತೆ ಅಭಿವೃದ್ದಿಯಿಂದ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ (ಹುಲ್ಲಳ್ಳಿ) ತಿಳಿಸಿದರು. ಶಾಸಕನಾಗಿರುವ ನನಗೆ ಅವರ ಸೇವೆಯನ್ನು ಮಾಡುವುದೇ ಮುಖ್ಯ ಗುರಿಯಾಗಿದ್ದು, ಜನರ ಸೇವೆಗಾಗಿ ದಿನದ 24 ಗಂಟೆಯೂ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.
ಕೆರೆ ಜಾಗ ಮಸೀದಿ ಪದಾಧಿಕಾರಿಗಳ ಹೆಸರಿಗೆ
ಸರ್ಕಾರಿ ಕೆರೆ ಜಾಗವನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್‌ ಪಟ್ಟಾ ಮಸೀದಿ ಪದಾಧಿಕಾರಿಗಳ ಹೆಸರಿಗೆ ಖಾತೆ ಮಾಡಿರುವುದನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ವಕ್ಫ್‌ ಬೋರ್ಡ್‌ಗೆ ಖಾತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳ ನಡೆಯ ವಿರುದ್ಧ ಪ್ರತಿಭಟನಾ ನಿರತರು ಕಿಡಿಕಾರಿದರು.
  • < previous
  • 1
  • ...
  • 286
  • 287
  • 288
  • 289
  • 290
  • 291
  • 292
  • 293
  • 294
  • ...
  • 555
  • next >
Top Stories
ಆರ್‌ಎಸ್‌ಎಸ್‌ ಮಾತ್ರವೇ ಅಲ್ಲ, ಹಿಂದು ಧರ್ಮವೂ ನೋಂದಣಿ ಆಗಿಲ್ಲ: ಭಾಗ್ವತ್‌
ಕಾರ್‍ಯಕ್ರಮಕ್ಕೆ ತಡವಾಗಿದ್ದಕ್ಕೆ ರಾಹುಲ್‌ಗೆ 10 ಪುಷಪ್‌ ಶಿಕ್ಷೆ!
ರಾಜ್ಯದ ಎತ್ತಿನಹೊಳೆ, ಶರಾವತಿ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್‌
ಸರ್ಕಾರಿ ಶಾಲೆ ಪ್ರವೇಶ 15 ವರ್ಷದಲ್ಲಿ 30% ಕುಸಿತ!
ಆಡ್ವಾಣಿ ಉದಾಹರಿಸಿ ನೆಹರೂ, ಇಂದಿರಾಗೆ ತರೂರ್‌ ಟಾಂಗ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved