ಮೇ 23ರಂದು ಸಾಮರಸ್ಯ ಸಂಗಮ ಕಾರ್ಯಕ್ರಮ, ಯೋಧರಿಗೆ ಸನ್ಮಾನಪಹಲ್ಗಾಮ್ ಕೃತ್ಯದಲ್ಲಿ ಅಮಾಯಕರನ್ನು ಬಲಿಪಡೆದ ಉಗ್ರರನ್ನು ಆಪರೇಷನ್ ಸಿಂದೂರ ಮೂಲಕ ಸೆದೆಬಡಿದು ಶತ್ರು ರಾಷ್ಟ್ರಕ್ಕೆ ತಕ್ಕಪಾಠ ಕಲಿಸಿದ ಸೇನೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಜಾತಿ, ಧರ್ಮ, ಭೇದ-ಭಾವವಿಲ್ಲದೆ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಮಾಜಿ ಹಾಗೂ ಕರ್ತವ್ಯನಿರತ ತಾಲೂಕಿನ ಸೈನಿಕರಿಗೆ ಕೃತಜ್ಞತೆ ಹಾಗೂ ಗೌರವ ಸಲ್ಲಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ.