ಕುಂದುವಾಡ ವಸತಿ ಯೋಜನೆ ಮುಂದುವರಿಕೆ ಒಪ್ಪಲ್ಲವಸತಿ ಯೋಜನೆಗೆ ಜಮೀನು ನೋಂದಣಿ ಮಾಡಿಕೊಡುವಂತೆ ಕುಂದುವಾಡ ಗ್ರಾಮದ 53-19.8 ಎಕರೆ ಪ್ರದೇಶದ ಗ್ರಾಮಸ್ಥರಿಗೆ ದೂಡಾದಿಂದ ಮತ್ತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಯೋಜನೆ ಕೈ ಬಿಡುವಂತೆ ಗ್ರಾಮದ ರೈತರು ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಆಯುಕ್ತ ಹುಲ್ಮನಿ ತಿಮ್ಮಪ್ಪ ಅವರಿಗೆ ಒತ್ತಾಯಿಸಿ, ಮನವಿ ಸಲ್ಲಿಸಿದ್ದಾರೆ.