ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆಯಲ್ಲಿ ದಲಿತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ನರಸಿಂಹಮೂರ್ತಿ ಅಧ್ಯಕ್ಷರಾದ ತಾವೇ ಮುಂದೆ ನಿಂತು ಹೋರಾಟ ನಡೆಸಿ ೮ ಎಕರೆ ಜಮೀನಿನಲ್ಲಿ ೨೧೦ ನಿವೇಶನಗಳನ್ನು ವಿಂಗಡಿಸಿದ್ದು ಅದರಲ್ಲಿ ಸಿಎ ನಿವೇಶನಗಳಾಗಿ ೨೦ ನಿವೇಶನ ಹೊರತುಪಡಿಸಿ ನೂರ ತೊಂಬತ್ತು ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ, ಅರ್ಧದಷ್ಟು ನಿವೇಶನಗಳನ್ನು ಎಸ್ಸಿ- ಎಸ್ಟಿ ಜನಾಂಗಕ್ಕೆ ನೀಡುತ್ತಿದ್ದು ಉಳಿದ ಅರ್ಧದಷ್ಟು ಜಮೀನು ನಿವೇಶನಗಳನ್ನು ಸಾರ್ವಜನಿಕವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿ, ಎಂಟು ಎಕರೆ ಪಕ್ಕದಲ್ಲಿಯೇ ಇನ್ನೂ ನಾಲ್ಕು ಎಕರೆ ಜಮೀನು ಇದ್ದು ಮುಂದಿನ ದಿನಗಳಲ್ಲಿ ಅದನ್ನು ಸಹ ನಿವೇಶನಗಳಾಗಿ ಪರಿವರ್ತನೆ ಮಾಡಿ ನೀಡಲಾಗುವುದು,ಆದಾಗ್ಯು ಈ ಹಿಂದೆ ೧೯೯೧- ೯೨ ರಲ್ಲಿ ೩೪ ಮಂದಿ ಮಾದಿಗ ಜನಾಂಗಕ್ಕೆ ಹಕ್ಕುಪತ್ರ ನೀಡಲಾಗಿದೆ.