ರಂಗ-ಶಂಕರನ ಕೃಪೆಯಿಂದ ನಾಡಿಗೆ ಮಳೆ-ಬೆಳೆಯಾಗಲಿದಿನದಿಂದ ದಿನಕ್ಕೆ ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದ್ದು ಪ್ರಕೃತಿಯಲ್ಲೂ ಅಸಮತೋಲನ ಉಂಟಾಗಿ ಹನಿ ಹನಿ ನೀರಿಗಾಗಿ ಜನ ಜಾನುವಾರುಗಳು ಪರದಾಡುವಂತಾಗಿದ್ದು ಶ್ರೀ ಕ್ಷೇತ್ರದ ಆರಾಧ್ಯ ದೈವಗಳಾದ ರಂಗ-ಶಂಕರ ಹಾಗೂ ಹಿರಿಯ ಶ್ರೀಗಳವರ ಕೃಪೆಯಿಂದ ಕಲ್ಪತರು ನಾಡಿಗೆ ಆದಷ್ಟು ಬೇಗ ಮಳೆ ಬರುವ ಮೂಲಕ ಎಲ್ಲರ ದಾಹ ತೀರುವಂತಾಗಿ ಉತ್ತಮ ಕೃಷಿ ಚಟುವಟಿಕೆಗಳು ಪ್ರಾರಂಭವಾಗಲಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಹರಸಿದರು.